*ಹುಬ್ಬಳ್ಳಿ ವಿದ್ಯಾನಗರ ಪೊಲೀಸರ ಭರ್ಜರಿ ಬೇಟೆ*
ಹುಬ್ಬಳ್ಳಿ: ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಖೋಟಾ ನೋಟು ಜಾಲ ಬೇಧಿಸಿದ ವಿದ್ಯಾನಗರ ಠಾಣೆ ಪೊಲೀಸರು ಮೈಸೂರ ಮೂಲದ ಸುಧೀರ್ ಮೆಹ್ತಾ ಅಲಿಯಾಸ್ ಮೊಹಮ್ಮದ್ ಆಸೀಫ ಎಂಬಾತನನ್ನು ಬಂಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್
ಬಂಧಿತನಿಂದ 500 ರೂ. ಮುಖ ಬೆಲೆಯ ಒಟ್ಟು1,87,45,000 ರೂ. ನಕಲಿ ನೋಟುಗಳ ಜಪ್ತಿ ಮಾಡಿದ್ದು, ಇದರಲ್ಲಿ ಐದು ಸಾವಿರ ರೂ. ಮಾತ್ರ ಅಸಲಿ ನೋಟು ಆಗಿದೆ. ಈತನಿಂದ ಒಂದು ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರು ಸಹ ಜಪ್ತ ಮಾಡಲಾಗಿದೆ ಎಂದರು.
ಪುಣೆ ಮೂಲದ ಅಶ್ವಿನಿ ಪೆದ್ದವಾಡ ಹಾಗೂ ಅವರ ಪುತ್ರಿ ಪೃಥಾಳಿಗೆ ವಂಚಿಸಿ ಕನಸ್ಟ್ರಕ್ಷನ್ ವ್ಯವಹಾರಕ್ಕೆ ಕಡಿಮೆ ಬಡ್ಡಿದರದಲ್ಲಿ ೫೦ ಕೋಟಿ ರೂ. ಹಣವನ್ನು ಸಾಲ ರೂಪದಲ್ಲಿ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಪ್ರೊಸೆಸಿಂಗ್ ಫೀಸ್ ಅರವತ್ತು ಲಕ್ಷ ರೂ. ನೀಡಬೇಕು ಎಂದು ನಂಬಿಸಿ, ಅಸಲಿ ಹಣ ಪಡೆದು ಎರಡು ಕೋಟಿ ರೂ.ನಕಲಿ ನೋಟು ನೀಡಿ ವಂಚಿಸಿದ್ದ.
ಮೈಸೂರು ಮದುವೆಯೊಂದರಲ್ಲಿ ಇವರನ್ನು ಪರಿಚಯ ಮಾಡಿಕೊಂಡಿದ್ದನಲ್ಲದೇ ಪೃಥಾಳನ್ನು ಸಂಪರ್ಕಿಸಲು ಪ್ರತ್ಯೇಕವಾದ ಮೊಬೈಲ್ ನಂಬರ್ ತೆಗೆದುಕೊಂಡಿದ್ದ. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿ ಎಸ್.ಟಿ. ಒಡೆಯರ, ಮಾರುತಿ ಗುಳ್ಳಾರಿ, ಅಲಿ ಶೇಖ್, ವಿದ್ಯಾನಗರ ಇನ್ಸ್ಪೆಕ್ಟರ್ ಜಯಂತ ಗೌಳಿ, ಎಂ.ಎಸ್. ಹೂಗಾರ, ಪ್ರಭು ಗಂಗೇನಹಳ್ಳಿ ಇತರರು ಇದ್ದರು.