*ನಾಡು ನುಡಿಯ ಸೇವೆಯ ಕಾಯಕಯೋಗಿ ಪ್ರೊ.ಕೌಜಲಗಿಯವರಿಗೆ ಸರ್ವಾಧ್ಯಕ್ಷ ಪಟ್ಟ*
ಹುಬ್ಬಳ್ಳಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ವತಿಯಿಂದ ಮಾ.20 ರಂದು ಹುಬ್ಬಳ್ಳಿ ನಗರ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್’ನಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿರಿಯ ಸಾಹಿತಿ ಪ್ರೋ.ಕೆ.ಎಸ್.ಕೌಜಲಗಿ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಳಿಗ್ಗೆ 8.30 ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಪಾಲಿಕೆ ಸಭಾನಾಯಕ ವೀರಣ್ಣ ಸವಡಿ, ನಾಡ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷರು ಮಾಡಲಿದ್ದು, ತಾಲೂಕು ಕಸಾಪ ಅಧ್ಯಕ್ಷೆ ವಿದ್ಯಾ ವಂಟಮುರಿ ನೇರವೇರಿಸಲಿದ್ದಾರೆ ಎಂದರು.
ಬೆಳಿಗ್ಗೆ 9 ಗಂಟೆಗೆ ಕಲಾತಂಡದೊಂದಿಗೆ ಕಾಮಾಕ್ಷಿ ದೇವಾಲಯದಿಂದ ಸವಾಯಿ ಗಂಧರ್ವ ಕಲಾಮಂದಿರದವರೆಗೆ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಇದಕ್ಕೆ ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ ಚಾಲನೆ ಕೊಡಲಿದ್ದಾರೆ. 10 ಗಂಟೆಗೆ ಸಮ್ಮೇಳನ ಉದ್ಘಾಟನೆ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಹಿತಿ ಬಿ.ವಿ.ಶಿರೂರ ವಹಿಸಲಿದ್ದಾರೆ. ಬಳಿಕ ಪ್ರೋ.ಕೆ.ಎಸ್.ಕೌಜಲಗಿ ಸರ್ವಾಧ್ಯಕ್ಷರ ನುಡಿ ನುಡಿಯಲಿದ್ದಾರೆ ಎಂದರು.
ಮಧ್ಯಾಹ್ನ: 12ಕ್ಕೆ ಆರೋಗ್ಯ-ಶಿಕ್ಷಣ-ಸಾಹಿತ್ಯ ಕುರಿತು ಗೋಷ್ಠಿ ನಡೆಯಲಿದ್ದು ಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಶಿವಶಂಕರ್ ಹಿರೇಮಠ ವಹಿಸುವರು. ಖ್ಯಾತ ವೈದ್ಯ ಡಾ. ಜಿ ಬಿ ಸತ್ತೂರ ಆಹಾರ ಮತ್ತು ಜೀವನ ಶೈಲಿ ಕುರಿತು, ಡಾ. ಚಿದಾನಂದ ಮನ್ಸೂರ್ ಶಿಕ್ಷಣ-ಉದ್ಯೋಗ ಸಂವಿಧಾನ ಆಶಯಗಳ ಕುರಿತು ಹಾಗೂ ಹಾಗೂ ವಚನಗಳಲ್ಲಿ ಸ್ತ್ರೀ ಸಬಲಿಕರಣ ಕುರಿತು ಡಾ. ಸ್ನೇಹಾ ಭೂಸನೂರ ವಿಷಯ ಮಂಡನೆ ಮಾಡಲಿದ್ದಾರೆ. ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 12ಕ್ಕೆ ಕೇಳೋಣ ಬನ್ನಿ ಕವಿಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಕವಿ ಮಹಾಂತಪ್ಪ ನಂದೂರ ವಹಿಸಲಿದ್ದು, ಕವಿ ಡಾ. ವೇದಾರಾಣಿ ದಾಸನೂರ ಆಶಯ ನುಡಿ ನುಡಿಯಲಿದ್ದಾರೆ.ಸುಮಾರು 25 ಕವಿಗಳು ಹಾಗೂ ಕವಯತ್ರಿಯರು ಕವನ ವಾಚನ ಮಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ 4.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು ಹಲವು ನಿರ್ಣಗಳನ್ನು ಅಂಗೀಕರಿಸಲಾಗುವುದು.ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಸಾನ್ನಿಧ್ಯವನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ರಂಗಕರ್ಮಿ ಡಾ. ಗೋವಿಂದ ಮಣ್ಣೂರ ವಹಿಸಲಿದ್ದಾರೆ. ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಸಮಾರೋಪ ಭಾಷಣ ಮಾಡಿದ್ದಾರೆಂದರು.
ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು
ಹುಬ್ಬಳ್ಳಿ ನಗರದ ವಿವಿಧ ಮಹಿಳಾ ಮಂಡಳದ ಸದಸ್ಯರು ಕಲಾ ಪ್ರದರ್ಶನ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ವಂಟಮುರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಎಸ್.ಕೆ.ಆದಪ್ಪನವರ,ಮಂಜುನಾಥ ಪಾಟೀಲ್, ಸಿದ್ದಮ್ಮ ಅಡವೆಣ್ಣವರ, ಅನಸೂಯಾ ಪಾಟೀಲ್ ಸೇರಿದಂತೆ ಇದ್ದರು.