*ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ*
ಹುಬ್ಬಳ್ಳಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಹುಬ್ಬಳ್ಳಿ ಧಾರವಾಡ ಮಹಾನಗರದ ವಿವಿಧ ಈದಗಾ ಮೈದಾನಗಳಲ್ಲಿ ಸೇರಿದಂತೆ ರಾಜ್ಯದಾದ್ಯಂತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಚನ್ನಮ್ಮ ವೃತ್ತ ಸಮೀಪ ಈದ್ಗಾ ಮೈದಾನದಲ್ಲಿ ಮಾಲಾನಾ ಜಹಿರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ವಿಶ್ವದೆಲ್ಲೆಡೆ ಸುಖ ಶಾಂತಿ ನೀಡುವಂತೆ, ಸಹಬಾಳ್ವೆ, ಸಾಮರಸ್ಯದಿಂದ ಬಾಳುವಂತೆ ಪ್ರಾರ್ಥಿಸಲಾಯಿತು. ಅಂಜುಮನ್ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಅಲ್ತಾಫ್ ಹಳ್ಳೂರ, ದಾದಾ ಹಯಾತ್ ಖೈರಾತಿ, ಶಿರಾಜ ಅಹ್ಮದ ಕುಡಚಿವಾಲೆ, ಮಜಹರ್ ಖಾನ್, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಶಫೀ ಮುದ್ದೇಬಿಹಾಳ, ಮಾಜಿ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಹಾಜಿ ಅಲಿ ಹಿಂಡಸಗೇರಿ,ಇಲಿಯಾಸ ಮನಿಯಾರ,ಆರೀಫ್ ಭದ್ರಾಪುರ, ಮೊಹ್ಮದ ಶಾಬಾಜ, ಶಾರೂಕ ಮುಲ್ಲಾ, ಶಫಿ ಯಾದಗಿರಿ, ರಾಜೇಸಾಬ ಸಿಕಂದರ, ಮೊಹ್ಮದ ಕೋಳೂರ, ಅಬ್ಬಾಸ ಯರಗಟ್ಟಿ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಪ್ರಾರ್ಥನೆ ನಂತರ ಸಂಪ್ರದಾಯದಂತೆ ಮುಸ್ಲಿಂ ಪ್ರಮುಖರು ಮೂರುಸಾವಿರಮಠಕ್ಕೆ ತೆರಳಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು. ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಹಿತ ಸಾಮೂಹಿಕ ಪ್ರಾರ್ಥನೆಯಲ್ಲಿ ಅಂಜುಮನ್ ಗೌರವ ಕಾರ್ಯದರ್ಶಿ ಬಶೀರ ಹಳ್ಳೂರ,ಜಂಟಿ ಕಾರ್ಯದರ್ಶಿ ರಫೀಕ ಬಂಕಾಪೂರ, ಶಿಕ್ಷಣ ಮಂಡಳಿ ಸದಸ್ಯರಾದ ಸಲೀಂ ಸುಂಡಕೆ, ನವೀದ್ ಮುಲ್ಲಾ, ರಿಯಾಜ್ ಖತೀಬ್, ಫಾರೂಕ್ ಅಬ್ಬುನವರ ಸಹಿತ ಸಾವಿರಾರು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
*ಉಣಕಲ್* ಈದ್ಗಾ ಮೈದಾನ ಟಿಂಬರ್ ಯಾರ್ಡ್ ರೇಲ್ವೆ ಸ್ಟೇಷನ್ ಹತ್ತಿರ ಉಣಕಲ್ ಹುಬ್ಬಳ್ಳಿ ಯಲ್ಲಿ
ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಹುಡಾ ಅಧ್ಯಕ್ಷ ಶಾಕೀರ ಅಲಿ ಸನದಿ ಮಾಜಿ ಲೋಕಸಭಾ ಸದಸ್ಯ ಐ ಜಿ ಸನದಿ, ಮಾಜಿ ಪಾಲಿಕೆ ಸದಸ್ಯ ಹಜರತ್ಅಲಿ ಎಮ್ ದೂಡ್ಡಮನಿ, ಹಾಗೂ ಅಹಲೆ ಸುನ್ನತ ಮುಸ್ಲಿಂ ಜಮಾತ ಪ್ಯಾಟಿಸಾಲ್ ಉಣಕಲ್ ಜಮಾತ್ ಅಧ್ಯಕ್ಷರಾದ ಶರಿಫ್ ಗರಗದ, ಸುನ್ನಿ ನೂರಾನಿ ಜುಮ್ಮಾ ಮಸೀದಿಯ ಅಧ್ಯಕ್ಷ ರಫೀಕ್ ಅಹ್ಮದ್ ದೂಡ್ಡಮನಿ ದಾವಲಸಾಬ ಬ ನದಾಫ್,ಹುಶೆನಬಾಷಾ ಹಜರತನವರ , ರಿಯಾಜ್ ದೊಡಮನಿ,ಹಜರತ್ ಅಲಿ ಅಮರಗೋಳ, ಖಾದರಬಾಷಾ ಶಿಬಾರಗಟ್ಟಿ , ಇಕ್ಬಾಲ್ ಹರ್ಲಾಪುರ,ಹಜರತ್ ಅಲಿ ಎಮ್ ನದಾಫ್ , ದಾದಾಪೀರ ದಾದುನವರ ಮಾಹೇಬೂಬ್ ಸಾಬ್ ಖಾನ್ ಭಾಯ್, ಮೌಲಾಸಾಬ್ ಶಿಭಾರಗಟ್ಟೆ, ಅಲಾಭಕ್ಷ್ ಗರಗದ್ ಪಾಲ್ಗೊಂಡಿದ್ದರು.
ಅಮರಗೋಳದಲ್ಲಿ ಸಹ ಸಾಮೂಹಿಕ ಪ್ರಾರ್ಥನೆ ಮೌಲಾನಾ ಶೌಕತ್ ಅಲಿ ಮುಲ್ಲಾ ನೇತೃತ್ವದಲ್ಲಿ ನಡೆಯಿತು.ಜಮಾತ್ ಅಧ್ಯಕ್ಷ ಬಾಬುಸಾಬ ನದಾಫ್, ಕಾಶೀಮ ನದಾಫ್, ನಜೀರ್ ಅಹ್ಮದ್ ಕೋಲಕಾರ, ಮಹ್ಮದ್ ರಫೀಕ್ ದರಗಾದ ಇತರರು ಇದ್ದರು.
ಧಾರವಾಡದ ಗುಲಗಂಜಿಕೊಪ್ಪದ ಈದ್ಗಾ ಮೈದಾನದಲ್ಲಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
*ಸಿಂಡಿಕೇಟ್ ಸದಸ್ಯರಾಗಿ ಮುಳ್ಳಳ್ಳಿ*
ಹುಬ್ಬಳ್ಳಿ : ಕೆ.ಎಲ್.ಇ.ಸಂಸ್ಥೆಯ ಹುಬ್ಬಳ್ಳಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶಿಕ್ಷಣ ತಜ್ಞ ಡಾ.ಲಿಂಗರಾಜ ಮುಳ್ಳಳ್ಳಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಿಯುಕ್ತಿಗೊಂಡಿದ್ದು, ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.