*ಘೋಡಕೆ ವೈಸ್ ಚೇರಮನ್, ಗೌ. ಕಾರ್ಯದರ್ಶಿಯಾಗಿ ರಮೇಶ್ ಬೆಳಗಾವಿ*
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದಾಡಿದ ದೇವರಾದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮೀಟಿಯ ನೂತನ ಚೇರಮನ್ ಆಗಿ ಚಾರ್ಟರ್ಡ್ ಅಕೌಂಟೆಂಟ್ ಚನ್ನವೀರ ಮುಂಗುರವಾಡಿ ಆಯ್ಕೆಯಾಗಿದ್ದಾರೆ.
ಸೋಮವಾರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಅವಧಿಯು ದಿನಾಂಕ:- 31 -3- 2025 ರಿಂದ 1-4- 2026 ವರೆಗೆ ಇರಲಿದ್ದು, ವೈಸ್ ಚೇರಮನ್ ಆಗಿ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿಯಾಗಿ ರಮೇಶ್ ಬೆಳಗಾವಿ ಆಯ್ಕೆಯಾದರು.
ನಿರ್ದೇಶಕ ಕೆ.ಎಲ್.ಪಾಟೀಲ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆಯಿತು.ಧರ್ಮದರ್ಶಿ ಗಳಾದ ಮಂಜುನಾಥ ಮುನವಳ್ಳಿ, ಬಾಳು ಮಗಜಿಕೊಂಡಿ, ಬಸವರಾಜ ಕಲ್ಯಾಣ ಶೆಟ್ಟರ್,ಉದಯ ನಾಯಕ, ಗೀತಾ ಕಲಬುರ್ಗಿ, ಶ್ಯಾಮಾನಂದ ಪೂಜಾರ, ವಿ.ಡಿ.ಕಾಮರೆಡ್ಡಿ, ಸಿದ್ದನಗೌಡ ಪಾಟೀಲ್, ಅಂದಾನಪ್ಪ ಚಾಕಲಬ್ಬಿ ವಸಂತ ಸಾಲಗಟ್ಟಿ, ಮ್ಯಾನೇಜರ್ ಈರಣ್ಣ ತುಪ್ಪದ ಇದ್ದರು.
ಮುಂಗುರವಾಡಿ ಲಯನ್ಸ್ ಕ್ಲಬ್ ಪರಿವಾರ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ.