ಗದಗ: ಇಲ್ಲಿನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ 16 ರಂದು ರಾತ್ರಿ ಮುಸುಕುಧಾರಿಗಳಿಂದ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ,
ಬೆಂಗಳೂರಿನ ನಾಯಂಡಹಳ್ಳಿ ಮೂರನೇ ಕ್ರಾಸ್ನ ತರಕಾರಿ ಮಾರ್ಕೆಟ್ ಬಳಿಯ ನಿವಾಸಿ ಅಶೋಕ ತಂದೆ ಶ್ರೀನಿವಾಸ (28), ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪೂರ ನಿವಾಸಿ ಮಂಜುನಾಥ್ ಅಲಿಯಾಸ್ ಕರಿಯಾ ತಂದೆ ನಾಗರಾಜ್ (28), ತುಮಕೂರಿನ ಹೆಟ್ಟೂರು ಹೋಬಳಿಯ ಶ್ರೀಕಂಟಯ್ಯನಪಾಳ್ಯ ನಿವಾಸಿ ಪ್ರಕಾಶ್ ಅಲಿಯಾಸ್ ಬೋಡಾ ತಂದೆ ಗಂಗಶಾನಯ್ಯ (34) ತುಮಕೂರಿನ ಉಪ್ಪಾರ ಹಳ್ಳಿ ನಿವಾಸಿ ಇಮ್ರಾನ್ ತಂದೆ ಅಮೀರ್ ಜಾನ್ (35) ಹಾಗೂ ಇನ್ನೊಬ್ಬ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಗೂಡು ತಾಲೂಕಿನ ಹೋಟಗಿ ನಿವಾಸಿ ಸಮರ್ಥ ತಂದೆ ರಮೇಶ್ ಜಾಧವ್ (19) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗೆ ಶೋಧ ನಡೆದಿದೆ ಎಂದರು.
ಬಂಧಿತರಿಂದ 25ಸಾವಿರ ಹಣ ಹಾಗೂ ಮೂರು ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. ವಿಜಯನಗರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬಂಧಿತ ಆರೋಪಿಗಳ ಮೇಲೆ ಕಳ್ಳತನದ ಪ್ರಕರಣಗಳು ದಾಖಲಾಗಿವೆ.
ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಗದಗ ಪೊಲೀಸರು, ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಮ್ ಬಿ ಸಂಕದ, ಡಿವೈಎಸ್ಪಿ ಜೆ.ಎಚ್ ಇನಾಮದಾರ ಹಾಗೂ ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಮಾರ್ಗದರ್ಶನದಲ್ಲಿ
ಬೆಟಗೇರಿ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ, ಬಡಾವಣೆ ಪಿಎಸ್ಐಗಳಾದ ಮಾರುತಿ ಜೋಗಂಡಕರ್, ಬಿ.ಟಿ ರಿತ್ತಿ ಹಾಗೂ ಸಿಬ್ಬಂದಿಗಳಾದ ಎನ್ ಡಿ ಹುಬ್ಬಳ್ಳಿ, ಎಸ್.ಎಚ್. ಕಮತರ, ಪರಶುರಾಮ ದೊಡಮನಿ, ಅಶೋಕ ಗದಗ, ನಾಗರಾಜ್ ಬರಡಿ, ಅಕ್ಷಯ್ ಬದಾಮಿ, ಶಿವಾನಂದ ಲಮಾಣಿ, ಶಿವಕುಮಾರ್ ತಹಸೀಲ್ದಾರ್, ಗುರುರಾಜ್ ಬೂದಿಹಾಳ, ಸಂಜು ಕೊರಡೂರ ಮುಂತಾದವರು ಕಾರ್ಯಾಚರಣೆ ತಂಡದಲ್ಲಿ ಇದ್ದರು.