*ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೃಷ್ಣಾ ಪರಾಪುರ, ಶಕುಂತಲಾ ಅಕ್ಕಿ ಆಯ್ಕೆ* / *ಬಿಜೆಪಿಗೆ ಮುಖಭಂಗ*
ಗದಗ: ತೀವ್ರ ಕುತೂಹಲ ಮೂಡಿಸಿದ್ದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಯಂತೆ ಅಧಿಕಾರಕ್ಕೇರಿದೆ.
ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣಾ ಪರಾಪೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಕುಂತಲಾ ಅಕ್ಕಿ ಇಬ್ಬರೂ ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರು ತಡಸದ, ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ ದಿಂಡೂರ ನಾಮಪತ್ರ ಸಲ್ಲಿಸಿದ್ದರು.
35 ಸದಸ್ಯ ಬಲದ ಗದಗ-ಬೆಟಗೇರಿ ನಗರಸಭೆಯಲ್ಲಿ 18 ಸದಸ್ಯ ಬಲವಿದ್ದ ಬಿಜೆಪಿ ಇದೀಗ ಮೂವರ ಅನರ್ಹತೆಯಿಂದ 15ಕ್ಕೆ ಕುಸಿದಿದೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿ ಒಟ್ಟು 16 ಸದಸ್ಯರು ಮತದಾನ ಮಾಡಬಹುದಾಗಿತ್ತು.
ಇಬ್ಬರು ಪಕ್ಷೇತರ ಸದಸ್ಯರ ಬೆಂಬಲದ ಜತೆಗೆ 17 ಸದಸ್ಯರನ್ನು ಹೊಂದಿರುವ ಕೈ ಪಡೆ ಸ್ಥಳೀಯ ಶಾಸಕರಾಗಿರುವ ಸಚಿವ ಎಚ್.ಕೆ. ಪಾಟೀಲ ಅವರ ಮತ ಸೇರಿ ಒಟ್ಟು 18 ಮಾತುಗಳೊಂದಿಗೆ ನಗರಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ.
ಚುನಾವಣೆ ಸಚಿವ ಎಚ್.ಕೆ.ಪಾಟೀಲರ ಅಣತಿಯಂತೆ ನಡೆದಿದೆ ಕಾನೂನು ಹೋರಾಟ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಚಿವ ಎಚ್.ಕೆ.ಪಾಟೀಲ ಅಭಿನಂದಿಸಿದರು.ಮಾಜಿ ಶಾಸಕ ಡಿ.ಆರ್.ಪಾಟೀಲ ಇತರ ಮುಖಂಡರು ಇದ್ದರು.
ಇತ್ತಿಚೆಗೆ ಬಿಜೆಪಿಯ ಉಷಾ ದಾಸರ, ಅಬ್ಬಿಗೇರಿ, ಮುಷಿಗೇರಿ ಸದಸ್ಯತ್ವ ರದ್ದುಗೊಂಡಿತ್ತು. ಹೀಗಾಗಿ ಕಮಲ ಪಡೆ ಮುಖಭಂಗ ಅನುಭವಿಸಿದೆ.