*ಪಾಲಿಕೆ ಸದಸ್ಯರಾದ ಚವ್ಹಾಣ, ಖಂಡೇಕರರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ*
ಹುಬ್ಬಳ್ಳಿ : ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಹುಬ್ಬಳ್ಳಿಯ ಸರ್ವೋದಯ ಸರ್ಕಲ್ ಬಳಿ ಮಹಾನಗರ ಪಾಲಿಕೆಯ ಜಾಗೆ ನೀಡಲು ತೆಗೆದುಕೊಂಡ ಸಂಪುಟ ನಿರ್ಣಯಕ್ಕೆ ಬೆಂಗಳೂರು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಜಾಗೆ ನೀಡಿದ ಕ್ರಮ ಕಾನೂನುಬಾಹಿರ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಮಾಜಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ್ ಚವ್ಹಾಣ ಮತ್ತು ಬೀರಪ್ಪ ಖಂಡೇಕರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ನಲ್ಲಿ ದಾಖಲಿಸಿದ್ದರು.
ಅರ್ಜಿ ಪರಿಶೀಲನೆ ನಡೆಸಿದ ಹೈಕೋರ್ಟ್ ವಾದ ಆಲಿಸಿ ತಡೆಯಾಜ್ಞೆ ನೀಡಿದೆ. ಕೇಶವಾಪುರ ಜಲಸಂಗ್ರಹಾಲಯ ಬಳಿಯ ಪಾಲಿಕೆ ಆಯುಕ್ತರ ಶಿಫಾರಸಿನ ಮೇರೆಗೆ ರಾಜ್ಯ ಸಂಪುಟ ಅನುಮೋದನೆ ನೀಡಿತ್ತು. ಮಿರ್ಜಿ ಮೇಯರ್ ಈರೇಶ ಅಂಚಟಗೇರಿ ಅನುಮೋದನೆ ನೀಡಿದ ಕ್ರಮ ಖಂಡನೆ ಮಾಡಿ ವಿರೋಧಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ಪರ ಬೆಂಗಳೂರಿನ ಧ್ಯಾನಚಂದ್ ಮತ್ತು ಹುಬ್ಬಳ್ಳಿಯ ಸಂಜು ಬಡಸ್ಕರ್ ವಾದ ಮಂಡಿಸಿದ್ದರು.