*ಶಾ ಹೇಳಿಕೆ ಖಂಡಿಸಿ ಕರೆ ನೀಡಿದ್ದ ಬಂದ್ಗೆ ಅವಳಿನಗರ ಸ್ತಬ್ಧ*
*ಅಬ್ಬಯ್ಯ ನೇತೃತ್ವದಲ್ಲಿ ರಾಷ್ಟ್ರಪತಿಗೆ ಮನವಿ – ಶಾಂತಿಯುತ ಮಾದರಿ ಪ್ರತಿಭಟನೆ*
ಹುಬ್ಬಳ್ಳಿ: ಸಂಸತ್ತಿನಲ್ಲೇ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಡಾ. ಬಿ ಆರ್ ಅಂಬೇಡ್ಕರ ಅವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗ ಕರೆ ನೀಡಿದ್ದ ಹುಬ್ಬಳ್ಳಿ ಧಾರವಾಡ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ಮಹಾನಗರ ಅಕ್ಷರಶಃ ಸ್ತಬ್ಧಗೊಂಡಿತ್ತು.
ಸುಮಾರು ನೂರಕ್ಕೂ ಹೆಚ್ಚು ಸಂಘಟನೆಗಳ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಅವಳಿನಗರದಶೇ. 90ಕ್ಕೂ ಹೆಚ್ಚು ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಿದ್ದವಲ್ಲದೇ ಶಾಲೆಗಳಿಗೆ ರಜೆ ಕೊಟ್ಟಿದ್ದು, ಬಸ್ ಸಂಚಾರ ಸಂಪೂರ್ಣ ಆಗಿತ್ತು.ಹೊಟೆಲ್ ವ್ಯವಹಾರದಿಂದ ಹಿಡಿದು ಎಳನೀರು ಮಾರುವವರೂ ವ್ಯಾಪಾರ ಸ್ಥಗಿಸಗೊಳಿಸಿದ್ದು ಬೆಳಿಗ್ಗೆ 6 ಗಂಟೆಯಿಂದಲೇ ದಲಿತಪರ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ರಸ್ತೆಗಿಳಿದು ಪ್ರತಿಭಟನೆ ಮಾಡಿದರಲ್ಲದೇ ಅಲ್ಲಲ್ಲಿ ತೆರೆಯಲಾಗಿದ್ದ ಹೋಟೆಲ್ ಇತರ ಅಂಗಡಿಗಳನ್ನು ಮುಚ್ಚಿಸಿದರು. ಕೆಲವಡೆ ಒತ್ತಾಯಾಪೂರ್ವಕವಾಗಿ ಬಂದ್ ಮಾಡಿಸಿದರೆ, ಇನ್ನೂ ಕೆಲವಡೆ ಖಾಸಗಿ ಬಸ್, ವಾಹನಗಳ ಚಕ್ರಗಳ ಗಾಳಿ ತೆಗೆದ ಘಟನೆ ಬಿಟ್ಟರೆ ಎಲ್ಲಿಯೂ ಸಣ್ಣ ಅಹಿತಕರ ಘಟನೆಯೂ ನಡೆದಿಲ್ಲವಾಗಿದೆ.
ಹುಬ್ಬಳ್ಳಿಯ ಚನ್ನಮ್ಮ ವರ್ತುಲದಲ್ಲಿ ಮತ್ತು ಧಾರವಾಡದ ಜುಬ್ಲಿ ವೃತ್ತದಲ್ಲಿ ವಿವಿಧ ಬಡಾವಣೆಗಳಿಂದ ಪ್ರತಿಭಟನಾಕಾರರು ದೊಡ್ಡ ಪ್ರಮಾಣದಲ್ಲಿ ಜಮಾಯಿಸಿ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಹಲವೆಡೆ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೀಮರಾವ ಅಭಿಮಾನಿಗಳ ಶಾ ವಿರುದ್ಧದ ಘೋಷಣೆ ಹಾಗೂ ಜೈ ಭೀಮ ಘೋಷಣೆಗಳು ಮುಗಿಲು ಮುಟ್ಟಿದವು.
ಹುಬ್ಬಳ್ಳಿಯಲ್ಲಿ ಅಭಿಮಾನಿ ಬಳಗದ ಗುರುನಾಥ ಉಳ್ಳಿಕಾಶಿ,ಮಾರುತಿ ದೊಡ್ಡಮನಿ, ಶ್ಯಾಮ ಜಾಧವ, ಶಂಕರ ಅಜಮನಿ,ದೊರೆರಾಜ ಮನಿಕುಂಟ್ಲ, ಸುರೇಶ ಕನ್ನಮಕ್ಕಲ್ಲ, ಸುವರ್ಣ ಕಲಕುಂಟ್ಲ,ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ನಾಗೇಶ ಕತ್ರಿಮಲ್ಲ, ಪ್ರಭು ಪ್ರಭಾಕರ,ಶ್ರೀನಿವಾಸ ಬೆಳದಡಿ, ಮೋಹನ ಅಸುಂಡಿ, ನಾಗರಾಜ ಗೌರಿ,ಚೇತನ ಹಿರೇಕೆರೂರ, ಮಲ್ಲಿಕಾರ್ಜುನ ಬಿಳಾರ, ಪ್ರೇಮನಾಥ ಚಿಕ್ಕತುಂಬಳ, ಶಿವಾನಂದ ಮುತ್ತಣ್ಣವರ, ಹನುಮಂತ ಹರಿಜನ, ರವಿ ಕಲ್ಯಾಣಿ,ಆರೀಪ ಭದ್ರಾಪುರ,ರಜನಿ ಬಿಜವಾಡ,ಸಂಜೀವ ಧುಮಕನಾಳ, ಪಕ್ಕಣ್ಣ ದೊಡ್ಡಮನಿ,ರವಿ ಕದಂ, ದೇವಣ್ಣ ಇಟಗಿ, ಶಂಕರ ಭೋಜಗಾರ, ಅಶೋಕ ಹಾದಿಮನಿ, ಇಂದುಮತಿ ಶಿರಗಾವಿ, ವಿನಾಯಕ ಅಮರಗೋಳ, ಮಂಜು ಲೂತಿಮಠ ಸೇರಿದಂತೆ ಅನೇಕರು ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಾ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಲು ವಿನಂತಿಸಲಾಯಿತು.
ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಅಲ್ತಾಫ್ ಹಳ್ಳೂರ, ಸತೀಶ ಮೆಹರವಾಡೆ, ಸದಾನಂದ ಡಂಗನವರ, ಪಾರಸಮಲ್ ಜೈನ, ಬಂಗಾರೇಶ ಹಿರೇಮಠ, ಚಂದ್ರಶೇಖರ ಜುಟ್ಟಲ, ದೀಪಾ ಗೌರಿ,ಅನ್ವರ ಮುಧೋಳ,ನವೀದ ಮುಲ್ಲಾ, ಶಿರಾಜ ಅಹ್ಮದ ಕುಡಚಿವಾಲೆ, ಗೌತಮರಾಜ ಹರಿವಾಣ,ಮಹೇಶ ದಾಬಡೆ,ಈಶ್ವರ ಶಿರಸಂಗಿ ಮುಂತಾದವರು ಪಾಲ್ಗೊಂಡಿದ್ದರು.
ಸ್ವತಃ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಹುಬ್ಬಳ್ಳಿ ಮತ್ತು ಧಾರವಾಡ ಪ್ರತಿಭಟನೆ ಸ್ಥಳಗಳಿಗೆ ಭೇಟಿ ನೀಡಿ ಬೆಂಬಲಿಸಿದರು.
ಧಾರವಾಡದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ಏಣಗಿ,ಹಿರಿಯ ವಕೀಲರಾದ ಉಡಕೇರಿ, ದಲಿತ ಮುಖಂಡರಾದ ಎಂ.ಅರವಿಂದ, ಲಕ್ಶ್ಮಣ ಬಕ್ಕಾಯಿ, ಚಂದ್ರಶೇಖರ ಬಿಜಾಪುರ, ಮಾಬುಲಿ ಶೇಕ್, ಲಕ್ಕಿ ರೋನಿತ್ ಧಾರೆ, ಸುರೇಶ್ ಕುಮಾರ, ಮಂಜುನಾಥ ನಿಮಲಿಯರ, ಪವನ ಬಿಜಾಪುರ್, ಮಾರುತಿ ಮತ್ತೂರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಬ್ಲಾಕ್ ಅಧ್ಯಕ್ಷರಾದ ಸಲೀಂ, ಹುಲಗೊರ, ಕಾರ್ಯದರ್ಶಿಯಾದ ಅಲ್ತಾಪ್ ಗೊಟ್ಯಾಳ, ವಿವಿಧ ಸಂಘಟನೆಯ ಮುಖಂಡರಾದ ಸಲೀಂ ಸಂಗನಮುಲ್ಲಾ, ಅಶೋಕ ಬಂಡಾರಿ,ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿ ಬಣದ ಪಾಪು ಧಾರೆ ಮುಂತಾದವರು ಭಾಗವಹಿಸಿದ್ದರು.
ಬಂದ್ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು. ಸ್ವತಃ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿಗಳಾದ ಸಿ.ಆರ್.ರವೀಶ, ಮಹಾಂತೇಶ ನಂದಗಾವಿ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಸ್ಥಿತಿ ಖುದ್ದಾಗಿ ಅವಲೋಕಿಸಿದರು.