*ಮುಂದುವರಿದ ಕಮಲ – ಕೈ ಹಂಚಿಕೆ ಸೂತ್ರ / ಎಲ್ಲಾ 28 ಸದಸ್ಯರ ಆಯ್ಕೆ*
ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23 ನೇ ಅವಧಿಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಇಂದು ಚುನಾವಣೆ ನಡೆದು (ಪ್ರತಿ ಸಮಿತಿಗೆ 7) ಒಟ್ಟು 28 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಸ್ಥಾಯಿ ಸಮಿತಿಯಲ್ಲಿ ಏಳು ಸದಸ್ಯರ ಪೈಕಿ ನಾಲ್ಕು ಆಡಳಿತಾರೂಢ ಹಾಗೂ ಮೂರು ವಿಪಕ್ಷ ಕಾಂಗ್ರೇಸ್ ಹಂಚಿ ಕೊಂಡಿದೆ.
ಬಿಜೆಪಿ ಒಂದು ಸದಸ್ಯ ಸ್ಥಾನ ಮಿತ್ರ ಪಕ್ಷ ಜೆಡಿಎಸ್ಗೆ ನೀಡಿದರೆ, ಕಾಂಗ್ರೆಸ್ ಪಕ್ಷೇತರರೊಬ್ಬರಿಗೆ ಅವಕಾಶ ಕಲ್ಪಿಸಿದೆ.
ಸ್ಥಾಯಿ ಸಮಿತಿ ಅಧ್ಯಕ್ಷರು ಯಾರು ಎಂಬುದು ನಿರ್ಣಯವಾಗೇ ಇಂದು ನಾಮಪತ್ರ ಸಲ್ಲಿಸಲಾಗಿದೆ . ಈ ಸದಸ್ಯರ ಆಯ್ಕೆ ನಂತರ ಅಧ್ಯಕ್ಷ ಗಾದಿಗೆ ಮತ್ತೆ ಚುನಾವಣೆ ದಿನಾಂಕ ನಿಗದಿಯಾಗಲಿದೆ.
ಮೇಯರ್ ಆಕಾಂಕ್ಷಿಯಾಗಿದ್ದ ರಾಜಣ್ಣ ಕೊರವಿಯವರಿಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಖಚಿತವಾಗಿದೆ.
ಮಹತ್ವದ ಹಣಕಾಸು ಸ್ಥಾಯಿ ಸಮಿತಿಗೆ ಮಾಜಿ ಉಪಮೇಯರ್ ಚಂದ್ರ ಶೇಖರ ಮನಗುಂಡಿ, ನಗರಯೋಜನೆ ಸಮಿತಿಗೆ ಶಂಕರ ಶೇಳಕೆ ಪಟ್ಟ ಏರಲಿದ್ದು, ಮತ್ತು ಲೆಕ್ಕಕ್ಕೆ ಇರುವ ಲೆಕ್ಕ ಸಮಿತಿಗೆ ಮಾಜಿ ಉಪಮೇಯರ್ ಉಮಾ ಮುಕುಂದ ಅವರು ಅಧ್ಯಕ್ಷರಾಗುವುದು ನಿಶ್ಚಿತ.
ಮೊದಲ ಬಾರಿ ಪ್ರವೇಶಿಸಿದ 42 ನೇ ವಾರ್ಡ್ ನ ಬಿಜೆಪಿ ಸದಸ್ಯ ಮಹಾದೇವಪ್ಪ ನರಗುಂದ ಸತತ ಮೂರನೇ ಬಾರಿಗೆ ಎಸ್ಸಿ ಕೋಟಾದಡಿ ಆರೋಗ್ಯ ಸ್ಥಾಯಿ ಸಮಿತಿಗೆ ಆಯ್ಕೆಯಾಗಿದ್ದು ವಿಶೇಷವಾಗಿದೆ.