ಹುಬ್ಬಳ್ಳಿ: ನೂತನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಧಿಕಾರ ಸ್ವೀಕಾರ ಮಾಡಿದ ನಂತರ ಅವಳಿನಗರದ ಅಕ್ರಮ ಕುಳಗಳಿಗೆ, ಗಾಂಜಾ ಖದೀಮರಿಗೆ, ರೌಡಿ ಶೀಟರ್ ಗಳಿಗೆ ಅಕ್ಷರಶಃ ನಡುಕ ಆರಂಭವಾಗಿದೆ.
ಸದ್ದಿಲ್ಲದ ಕಾರ್ಯಾಚರಣೆ ಅಂಗವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹಾಗೂ ಆರೋಪಿತರಿಗೆ ಸಹಾಯ ಮಾಡಿದ 8ಜನರನ್ನು ಸೇರಿ ಒಟ್ಟು 10 ಜನರನ್ನು ಬಂಧಿಸಿ ಒಂದು ಕೆಜಿ 779 ಗ್ರಾಂ ಗಾಂಜಾ ಬೆಂಡಿಗೇರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಖಿಲೇಶ, ಆಂಥೋನಿ, ಕಿರಣ, ಮಹಾದೇವ, ಪ್ರಶಾಂತ, ಅರುಣ, ಲಕ್ಷ್ಮಣ, ಫರನ್, ಆದರ್ಶ, ವಿಶಾಲ ಎಂಬುವರೇ ಬಂದಿತರಾದವರು.
ಮಾದಕ ವಸ್ತು ಗಾಂಜಾವನ್ನು ಯಾರೋ ಇಬ್ಬರು ವ್ಯಕ್ತಿಗಳು ಮಾರಾಟ ಮಾಡುತ್ತಿದ್ದು ಅವರ ಹತ್ತಿರ ಹಲವಾರು ಜನರು ಗಾಂಜಾವನ್ನು ಖರೀದಿ ಮಾಡಲು ನಿಂತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಗಿತ್ತು.