ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ರಂಗಪಂಚಮಿ ಹಿನ್ನೆಲೆಯಲ್ಲಿ ಅಕ್ಷರಶಃ ಬಣ್ಣದಲ್ಲಿ ಮಿಂದೆದ್ದಿದೆ.
ಹಳೇ ಹುಬ್ಬಳ್ಳಿ, ದುರ್ಗದಬೈಲು, ಚನ್ನಮ್ಮ ವೃತ್ತ, ಕೇಶವಾಪುರ, ಚೆನ್ನಪೇಟ, ಹೊಸೂರು, ಗೋಕುಲ ರಸ್ತೆ , ಕಮರಿಪೇಟೆ,ವಿದ್ಯಾ ನಗರ ಸೇರಿ ಇಡೀ ಹುಬ್ಬಳ್ಳಿಯಲ್ಲಿ ಜನತೆ ರಂಗಿನಾಟದಲ್ಲಿ ಪಾಲ್ಗೊಂಡಿದ್ದರು.
ನಗರದಲ್ಲಿ ಸುಮಾರು 450ಕ್ಕೂ ಹೆಚ್ಚು ಕಡೆ ಸಾರ್ವಜನಿಕ ರತಿ ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಎಲ್ಲಾ ಕಡೆ ಶಾಂತ ರೀತಿಯಲ್ಲಿ ಕಾಮದಹನ ಮಾಡಲಾಗಿದೆ.
ಹೋಳಿ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗತ್ತಲ್ಲದೇ ಖಡಕ್ ಆಯುಕ್ತ ಶಶಿಕುಮಾರ್ ಸ್ವತಃ ಉಸ್ತುವಾರಿ ವಹಿಸಿದ್ದರು. ಹಾಗೆಯೇ ತಮ್ಮ ಮೊದಲ ರಂಗಿನ ಹಬ್ಬಕ್ಕೆ ಸಾಕ್ಷಿಯಾದರು.
*ಇತರೆ ಮಹತ್ವದ ಸುದ್ದಿಗಳು*
1) ಅಮೆರಿಕನ್ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 5.57 ಕ್ಕೆ ಮತ್ತು ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆ 4.27 ಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ಬರಲಿದ್ದಾರೆ.
ಸುನಿತಾ ಜೊತೆ ಅವರ ತಂಡದ ಸದಸ್ಯರಾದ ಬುಚ್ ವಿಲ್ ಮೋರ್, ನಿಕ್ ಹೇಗ್, ಅಲೆಕ್ಸಾಂಡರ್ ಗೊರ್ಬುನೊವ್ ಕೂಡಾ ಇದ್ದಾರೆ.
ಸುನಿತಾ ವಿಲಿಯಮ್ಸ್ ಮತ್ತು ತಂಡ ನೇರವಾಗಿ ಫ್ಲೋರಿಡಾದ ಕರಾವಳಿಗೆ ಸ್ಪೇಸ್ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆ ಬಂದಿಳಿಯಬಹುದು ಎಂದು ನಾಸಾ ತಿಳಿಸಿದೆ.
2) ಪಾಕಿಸ್ತಾನ ಕ್ರಿಕೆಟ್ ತಂಡದ ಸೋಲಿನ ಸರಣಿ ಮುಂದುವರೆದಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ತಂಡ ಎರಡನೇ ಟಿ20ಯಲ್ಲೂ ಐದು ವಿಕೆಟ್ ಸೋಲು ಕಂಡಿದೆ.
3) ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ನೇತೃತ್ವದಲ್ಲಿ ವೀರ ಮಾರುತಿ ಯುವಕ ಮಂಡಲ ವತಿಯಿಂದ ನಾಳೆಯಿಂದ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ವಿಜೇತರು 1.50 ಲಕ್ಷ ರೂಪಾಯಿ ಪಡೆಯಲಿದ್ದಾರೆ.