ಆರು ಪತ್ರಕರ್ತರಿಗೆ ಕನ್ನಡ ಹಬ್ಬದ ಗೌರವ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವತಿಯಿಂದ ನಾಳೆ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಪ್ರತಿಷ್ಠಿತ ಧೀಮಂತ ಪ್ರಶಸ್ತಿಯನ್ನು 68 ಸಾಧಕರಿಗೆ ನೀಡಲು ತೀರ್ಮಾನಿಸಲಾಗಿದೆ.
ಈ ವಿಷಯವನ್ನು ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಮೇಯರ್ ವೀಣಾ ಬಾರದ್ವಾಡ ಪ್ರಕಟಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಪ್ರೊ. ಕೆ.ಎಸ್.ಕೌಜಲಗಿ, ಉದ್ಯಮಿ ರಮೇಶ್ ಪಾಟೀಲ್, ನೃತ್ಯ ಪಟು ಸಹನಾ ಭಟ್, ಗೌತಮ್ ಗುಲೇಚಾ, ಬಹುಮುಖ ಪ್ರತಿಭೆ ಕುಮಾರ್ ಬೇಂದ್ರೆ , ಎಸ್ ಎಸ್ ಕೆ ಸಮಾಜದ ಹಿರಿಯರಾದ ವಿಠಲ ಲದವಾ ಸೇರಿದಂತೆ ಗಣ್ಯರು,ಹುಧಾ ಬಂಟರ ಸಂಘ, ಮುರುಡೇಶ್ವರ ಕ್ರಿಕೆಟ್ ಅಕಾಡೆಮಿ ಮುಂತಾದವರಿಗೆ ಪ್ರಶಸ್ತಿ ಬಂದಿದೆ.
ಪತ್ರಿಕೋದ್ಯಮದಲ್ಲಿ ಸುಶೀಲೇಂದ್ರ ಕುಂದರಗಿ, ವೀರೇಶ ಹುಂಡಿಗಿ, ಕೃಷ್ಣಿ ಶಿರೂರು, ವಿಕ್ರಂ ನಾಡಗೀರ, ಜಾವೇದ್ ಆದೋನಿ, ಹಿರಿಯ ಛಾಯಾಗ್ರಾಹಕ ಗಣಪತಿ ಜರತಾರಘರ ಅವರಿಗೆ ಧೀಮಂತ ಪ್ರಶಸ್ತಿ ದೊರೆತಿದೆ.
ಧೀಮಂತ ಸನ್ಮಾನ ಸಮಿತಿಯಲ್ಲಿ ಉಪಮೇಯರ್ ಸತೀಶ ಹಾನಗಲ್, ವಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲಾ,ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ,ರಾಧಾಬಾಯಿ ಸಫಾರೆ,ಉಮೇಶಗೌಡ ಕೌಜಗೇರಿ, ಸರತಾಜ ಅಧೋನಿ,ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ಸದಸ್ಯ ಕಾರ್ಯದರ್ಶಿಯಾಗಿದ್ದು ವಿವಿಧ ಸಾಧಕರನ್ನು ಅಂತಿಮಗೊಳಿಸಿ ಮೇಯರ್ ವೀಣಾ ಬಾರದ್ವಾಡ ನೇತೃತ್ವದ ಕೇಂದ್ರ ಸಮಿತಿಗೆ ಸಲ್ಲಿಸಿ ಅಂತಿಮಗೊಂಡಿತು.
ನಾಳೆ ಬೆಳಿಗ್ಗೆ ಭುವನೇಶ್ವರಿ ದೇವಿ ಮೆರವಣಿಗೆ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಮಠದಿಂದ ಬೆಳಿಗ್ಗೆ ಗಂಟೆಗೆ ನಡೆಯಲಿದ್ದು ಸಾಯಂಕಾಲ 4 ಗಂಟೆಗೆ ಇಂದಿರಾಗಾಜಿನ ಮನೆಯಲ್ಲಿ ನಡೆವ ವರ್ಣರಂಜಿತ ಕಾರ್ಯಕ್ರಮದಲ್ಲಿ ಧೀಮಂತ ಸನ್ಮಾನ ನಡೆಯಲಿದೆ.
ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವಾ ಕ್ಷೇತ್ರ, ಪತ್ರಿಕೋದ್ಯಮ, ಚಿತ್ರಕಲಾ, ಶಿಕ್ಷಣ ,ಸಂಗೀತ,ತಾಂತ್ರಿಕ ಸೇರಿದಂತೆ ಸುಮಾರು ವಿವಿಧ ಕ್ಷೇತ್ರದ ಸಾಧಕರನ್ನು ಅಂತಿಮಗೊಳಿಸಲಾಗಿದ್ದು ಧೀಮಂತ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.