*ಉ.ಕ.ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಐಮೆಕ್ಸ್ / ಎಂಟು ವರ್ಷಗಳ ನಂತರ ಕೈಗಾರಿಕಾ ಪ್ರದರ್ಶನ/ 16 ಜನ ಸಾಧಕರಿಗೆ ಉದ್ಯಮ ರತ್ನ ಪ್ರಶಸ್ತಿ*
ಹುಬ್ಬಳ್ಳಿ : ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕಲ್ಲೂರ ಬಡಾವಣೆ ಮೈದಾನದಲ್ಲಿ ಮೇ 16 ರಿಂದ ನಾಲ್ಕು ದಿನಗಳ ಕಾಲ ಐಎಂಇಎಕ್ಸ್(IMEX) ಹುಬ್ಬಳ್ಳಿ 2025 ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ.
ಸಂಘದ ಅಧ್ಯಕ್ಷರಾದ ಗಿರೀಶ ನಲವಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಪ್ರದರ್ಶನದ ಪೂರ್ವಭಾವಿ ಕಾರ್ಯಕ್ರಮ ಮೇ 3 ರಂದು ಸಂಜೆ 5-30ಕ್ಕೆ ಕರ್ನಾಟಕ ಜಿಮಖಾನಾ ಕ್ಲಬ್ ನಲ್ಲಿ ನಡೆಯಲಿದೆ. ವಿಭವ ಗ್ರೂಪ್ ಆಪ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ನಂದಕುಮಾರ್, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಮಾಜಿ ನಿವೃತ್ತ ಕುಲಪತಿ ಡಾ. ಅಶೋಕ ಶೆಟ್ಟರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರದರ್ಶನದಲ್ಲಿ 272 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಪ್ರದರ್ಶನದಲ್ಲಿ ಸಂಶೋಧಿತ ಯಂತ್ರೋಪಕರಣಗಳು ಇಂಡಸ್ಟ್ರಿಯಲ್ ಕೈಗಾರಿಕಾ ವಾಲುಗಳು, ಪಂಪುಗಳು, ಮೊಟರಗಳು ಪ್ರದರ್ಶನಕ್ಕೆ ಇರಲಿವೆ.ಸುಮಾರು ಎಂಟು ವರ್ಷದ ನಂತರ ಕೈಗಾರಿಕಾ ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಬಾರಿ 16 ಜನರಿಗೆ ಮೇ ೧೭ ರಂದು ಉದ್ಯಮಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.
ಗೋಷ್ಠಿಯಲ್ಲಿ ಇವೆಂಟ್ ಚೇರಮನ್ ರಮೇಶ್ ಪಾಟೀಲ್,ಶಂಕರ್ ಹಿರೇಮಠ, ಮನೋಹರ ಕೊಟ್ಟೂರಶೆಟ್ಟರ, ಜೆ. ಸಿ.ಮಠದ, ಅಶೋಕ್ ಕುನ್ನೂರ ಇದ್ದರು.