*25 ಲಕ್ಷ ಮಾತ್ರ ಕೊಟ್ಟಿದ್ದೇನೆ*/
*ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರು ವಿನಾಕಾರಣ ದುರ್ಬಳಕೆ*: *ವಿಷಾದ*
ಹುಬ್ಬಳ್ಳಿ: ಗೋಪಾಲ್ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಅವರ ಪಾತ್ರ ಏನೂ ಇಲ್ಲ!
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆಂದು ಗೋಪಾಲ್ ಜೋಶಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಸ್ವತಃ ದುರುದಾರೆ ಸುನೀತಾ ಚವ್ಹಾಣ ನೀಡಿದ ಸ್ಪಷ್ಟನೆಯಿದು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು , ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ವಿನಾಕಾರಣ ಎಳೆದು ತರಲಾಗುತ್ತಿದೆ ಎಂದರು.
ಪಾಪ ಪ್ರಲ್ಹಾದ ಜೋಶಿ ಅವರ ಪಾತ್ರ ಇದರಲ್ಲಿ ಏನೂ ಇಲ್ಲ. ಅವರು ತುಂಬಾ ಒಳ್ಳೆಯವರು. ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಜೋಶಿ ಅವರನ್ನು ನಾನು ಭೇಟಿ ಮಾಡಬೇಕಿತ್ತು. ಆದರೆ, ಅದಕ್ಕೆ ಇವರು ಬಿಡಲಿಲ್ಲ. ಈ ವಂಚನೆ ಪ್ರಕರಣದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರದ್ದಾಗಲಿ, ದೇವಾನಂದ ಚವ್ಹಾಣ ಅವರದ್ದಾಗಲಿ ಯಾವ ಪಾತ್ರವೂ ಇಲ್ಲವೆಂದು ಹೇಳಿದರು. ತಾವು ದಾಖಲಿಸಿರುವ ಈ ಪ್ರಕರಣದಲ್ಲಿ ಮಾದ್ಯಮಗಳು ಅಮಿತ್ ಶಾ ಮತ್ತು ಪ್ರಲ್ಹಾದ ಜೋಶಿ ಅವರನ್ನು ಎಳೆದು ತರುವುದು ನನಗೆ ಸರಿ ಕಾಣುವುದಿಲ್ಲ.
ಬಿಜೆಪಿ ಟಿಕೆಟ್ಗಾಗಿ ಗೋಪಾಲ್ ಜೋಶಿ ಅವರಿಗೆ ನಾನು ಕೊಟ್ಟಿರುವುದು 25 ಲಕ್ಷ ಮಾತ್ರ. 2 ಕೋಟಿ ಎಲ್ಲಾ ಸುಳ್ಳು. 2 ಕೋಟಿ ಅಂತೆಲ್ಲಾ ಹೇಳುತ್ತಾರಷ್ಟೇ! ಎಂದು ಸ್ವತಃ ದುರುದಾರೆ ಸುನೀತಾ ಅವರೇ ಮಧ್ಯಮಗಳೆದುರು ಸ್ಪಷ್ಟಪಡಿಸಿದರು.
ಟಿಕೆಟ್ ಸಿಗದಿದ್ದಾಗ ಕೊಟ್ಟ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ದೂರು ಕೊಟ್ಟಿದ್ದೇನೆ. ಆದರೆ, ಇದರಲ್ಲಿ ಬಿಜೆಪಿ ಹೈಕಮಾಂಡ್ ಹೆಸರನ್ನ ವಿನಾಕಾರಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಬಿಜೆಪಿ ಹೈಕಮಾಂಡ್ ಅನ್ನು ಇದಕ್ಕೆ ತಳುಕು ಹಾಕಬೇಡಿ ಎಂದೂ ಮನವಿ ಮಾಡಿದರು.
ನಾನು ನೇರವಾಗಿ ಗೋಪಾಲ್ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ. ಹಣ ವಾಪಸ್ ಕೊಟ್ಟಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲವೆಂದರು.