*ಬೃಹತ್ ಪ್ರತಿಭಟನಾ ಮೆರವಣಿಗೆ / ಐದು ಸಾವಿರಕ್ಕೂ ಹೆಚ್ಚು ಜನ ಭಾಗಿ*
ಹುಬ್ಬಳ್ಳಿ : ಇತ್ತೀಚೆಗಷ್ಟೇ ಲೋಕಸಭಾ ಹಾಗೂ ರಾಜ್ಯಸಭೆಯಲ್ಲಿ ಅಂಗಿಕಾರಗೊಂಡ ವಕ್ಫ್ ತಿದ್ದುಪಡಿ ವಿಧೇಯಕದ ವಿರುದ್ಧ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಬೃಹತ್ ಮೆರವಣಿಗೆ ನಡೆಸಿ ವಿರೋಧ ವ್ಯಕ್ತಪಡಿಸಿತು.
ಅಂಜುಮನ್ ಅಧ್ಯಕ್ಷರಾದ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿ ವಿಧೇಯಕ ವಿರೋಧಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮೌಲಾನಾ ಜಹಿರುದ್ದೀನ ಖಾಜಿ, ಮೌಲಾನಾ ಮಹ್ಮದ್ ಅಲಿ ಖಾಜಿ, ಪದಾಧಿಕಾರಿಗಳಾದ ಎ.ಎ.ಅತ್ತಾರ, ಬಶೀ ಹಳ್ಳೂರ, ದಾದಾ ಹಯಾತ್ ಖೈರಾತಿ, ಮಹ್ಮದ್ ರಫೀಕ್ ಬಂಕಾಪುರ, ಮಹ್ಮದ್ ಇರ್ಷಾದ್ ಬಳ್ಳಾರಿ, ಡಿಸಿಸಿ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ, ಹಾಜಿ ಮುನ್ನಾ ವಡ್ಡೋ, ಹಾಜಿ ಮುಸ್ತಾಕ್ ಸುಂಡಕೆ, ಸಮಿತಿಯ ಬಶೀರ್ ಗೂಡಮಾಲ್, ಸಲೀಂ ಸುಂಡಕೆ, ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರ, ಇಲಿಯಾಸ್ ಮನಿಯಾರ, ಇಮ್ರಾನ್ ಯಲಿಗಾರ, ಮಾಜಿ ಚೇರಮನ್ ಮಹಮದ್ ಯುಸೂಫ್ ಸವಣೂರ, ಬಾಬಾ ಜಾನ್ ಮುಧೋಳ, ಹಾಜಿ ಅಲಿ ಹಿಂಡಸಗೇರಿ ಸಹಿತ ಸಮಾಜದ ಅನೇಕ ಮುಖಂಡರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ತಿದ್ದುಪಡಿಯಿಂದ ಆಗುವ ತೊಂದರೆಯ ವಾಸ್ತವ ಬಿಚ್ಚಿಟ್ಟರು. ಹೆಚ್ಚು ಜನ ಪಾಲ್ಗೊಂಡ ಪರಿಣಾಮ ಸಂಚಾರ ವ್ಯವಸ್ಥೆ ಅಕ್ಷರಶಃ ಬಂದ್ ಆಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.