ನೆಹರೂ ಮೈದಾನದಲ್ಲಿ ಸಾರ್ವಜನಿಕರಿಗೆ ದರ್ಶನ /23ರಂದು ಬೃಹತ್ ಶೋಭಾಯಾತ್ರೆ*
ಹುಬ್ಬಳ್ಳಿ: ಗುರು ಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿ ಹಾಗೂ ಶ್ರೀ ವಾದಿರಾಜ ಯತಿಗಳ ಮೂಲ ಬೃಂದಾವನದ ತದ್ರೂಪ ಮಾದರಿಯನ್ನು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸ್ಥಾಪಿಸಲಾಗುತ್ತಿದ್ದು ಏ.22 ರ ಸಂಜೆ 5 ಗಂಟೆಯಿಂದ 23ರ ರಾತ್ರಿ 9ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿದೆ.
ತತ್ವದರ್ಶನ ಸಮೀತಿಯ ಸದಸ್ಯ ಪಂ. ಶ್ರೀಹರಿ ಆಚಾರ್ಯ ವಾಳ್ವೇಕರ ಬುಧವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಲೋಕ ಕಲ್ಯಾಣಾರ್ಥವಾಗಿ ಈ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಈಗಾಗಲೇ ಪೂರ್ವ ಸಿದ್ಧತೆಗಳು ಭರದಿಂದ ನಡೆದಿದೆ.ತದ್ರೂಪ ಬೃಂದಾವನಗಳ ದರ್ಶನಕ್ಕೂ ಮೊದಲು ಗಣಹೋಮ ಸಹಿತ ವಿವಿಧ ಹಮ್ಮಿಕೊಳ್ಳಲಾಗಿದೆ. ತೊರವಿಗಲ್ಲಿ ರಾಯರ ಮಠದಲ್ಲಿ 17 ರಿಂದ 22ರ ವರೆಗೆ ಮಂತ್ರಾಲಯದ ಶ್ರೀಗಳಾದ ಸುಬುಧೇಂದ್ರ ತೀರ್ಥರು ಮತ್ತು ಸೋದೆಯ ವಿಶ್ವವಲ್ಲಭ ತೀರ್ಥರ ಸಂಕಲ್ಪದಂತೆ ದಿನಂಪ್ರತಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆಯೆಂದರು.
ವೇಣುಗೋಪಾಲ ಆಚಾರ್ಯರು ಮಾತನಾಡಿ, ಈ ಭವ್ಯ ಕಾರ್ಯಕ್ರಮಕ್ಕೆ 25ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು
ತದ್ರೂಪ ಬೃಂದಾವನ ಸ್ಥಾಪನೆಯ ಎರಡನೇ ದಿನ 23ರ ಸಂಜೆ 4 ಗಂಟೆಗೆ ಶ್ರೀ ರಾಘವೇಂದ್ರ ಯತಿಗಳ ಮತ್ತು ಶ್ರೀ ವಾದಿರಾಜ ಯತಿವರೇಣ್ಯರ ಭವ್ಯ ಶೋಭಾಯಾತ್ರೆಯು ತೊರವಿಗಲ್ಲಿಯ ರಾಯರ ಮಠದಿಂದ ಆರಂಭವಾಗುವ ಶೋಭಾಯಾತ್ರೆಯು ತೊರವಿಗಲ್ಲಿ, ಶಾ ಬಜಾರ್, ದುರ್ಗದ ಬಯಲು, ಬ್ರಾಡವೇ, ಕೊಪ್ಪೀಕರ ರಸ್ತೆಯ ಮಾರ್ಗವಾಗಿ ನೆಹರೂ ಮೈದಾನ ತಲುಪಲಿದೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮದನ ಕುಲಕರ್ಣಿ ತಿಳಿಸಿದರಲ್ಲದೆ ಇಬ್ಬರೂ ಮಠಾಧೀಶರು ಪೂಜಿಸುವ ಮೂಲ ರಾಮನ ವಿಗೃಹ ಸೇರಿದಂತೆ ಇತರ ವಿಗೃಹಗಳ ಶೋಭಾಯಾತ್ರೆ ನಡೆಯಲಿದೆ ಎಂದು ಹೇಳಿದರು.
ಸಮೀತಿಯ ಸದಸ್ಯರಾದ ಎ.ಸಿ. ಗೋಪಾಲ,ಬಿಂದುಮಾಧವ ಪುರೋಹಿತ, ಎ ನಾಗರಾಜ ಕಟ್ಟಿ, ಉದ್ಯಮಿ ಸಂತೋಷ ಮುರ್ಗಿಪಾಟೀಲ, ಅಣ್ಣಪ್ಪ ಗೋಕಾಕ ಇತರರು ಇದ್ದರು.