ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟಸಿಟಿ ಯೋಜನೆಯನ್ವಯ ಡಿಜಿಟಲೀಕರಣ ಕಾಮಗಾರಿ ಮಾಡಲಾಗಿದ್ದು ,ಇಲ್ಲಿ ಡಿಜಟಲಿಕರಣದಲ್ಲಿ ಅಳವಡಿಸಲಾದ ಸ್ಮಾರ್ಟ್ ಹೆಲ್ತಕೇರ ಅವ್ಯವಹಾರ ಕುರಿತು, ಪಾಲಿಕೆಯ ಸದನ ಸಮಿತಿಯು ಅವ್ಯವಹಾರದ ಮಾಹಿತಿ ಪಡೆಯಿತು.
ಹುಬ್ಬಳ್ಳಿ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆಸಿದ ಸಭೆಯಲ್ಲಿ ಮಾಜಿಮಹಾಪೌರರು ಭಾಗವಹಿಸಿ ಸ್ಮಾರ್ಟಹೆಲ್ತಕೇರ ಮಶಿನಗಳನ್ನ ವೀಕ್ಷಿಸಿ ಅನೇಕ ಘಟನೆಗಳ ಬಗ್ಗೆ ಮಾಹಿತಿ ಪಡೆದರು.
ಪಾಲಿಕೆ ಸಭಾನಾಯಕ ವೀರಣ್ಣ ಸವಡಿಯವರ ಅಧ್ಯಕ್ಷತೆಯಲ್ಲಿ ನಡೆದಂತ ಈ ಸಭೆಯಲ್ಲಿ ಮಾಜಿಮಹಾಪೌರರಾದ ಈರೇಶ ಅಂಚಟಗೇರಿ , ಶಿವು ಹಿರೇಮಠ, ಪಾಲಿಕೆ ಅಧೀಕ್ಷಕ ಅಭಿಯಂತರ ವಿಜಯಕುಮಾರ, ಆರೋಗ್ಯ ಅಧಿಕಾರಿ ಶ್ರೀಧರ್ ದಂಡೆಪ್ಪನವರ, ಸ್ಮಾರ್ಟ್ ಸಿಟಿ ಅಧಿಕಾರಿ ಬಸವರಾಜ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದು ಸಮಿತಿಯ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ
3.ಕೋಟಿ 26 ಲಕ್ಷ ವೆಚ್ಚದಲ್ಲಿ ಯಾವುದೇ ಕಾಮಗಾರಿಗಳ ಮಾಹಿತಿ ಸರಿಯಾಗಿಲ್ಲದೇ ಇರುವುದು ಕಂಡು ಬಂತು. ಜತೆಗೆ ಇವತ್ತು ನಡೆದ ಸಭೆಯಲ್ಲಿ ಸ್ಮಾರ್ಟ ಸಿಟಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಕಾರ್ಯಗಳ ವಿಚಾರದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಆಗದೇ ಇರುವುದು ಕಂಡು ಬಂದಿತು.