*625ಕ್ಕೆ 625 ಅಂಕ ಪಡೆದ ಇಪ್ಪತ್ತೆರಡು ವಿದ್ಯಾರ್ಥಿಗಳು*
ಹದಿನೆಂಟನೇ ಸ್ಥಾನದಲ್ಲಿ ಧಾರವಾಡ ಜಿಲ್ಲೆ*
ಬೆಂಗಳೂರು : ಕಳೆದ ಮಾರ್ಚ್ನಲ್ಲಿ ನಡೆದ ಎಸ್ಎಸ್ಎಲ್ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಒಟ್ಟಾರೆ ಶೇ. 66.14ರಷ್ಟು ಫಲಿತಾಂಶವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. 8ರಷ್ಟು ಫಲಿತಾಂಶ ಹೆಚ್ಚಳವಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿವರಗಳನ್ನು ಮಾಧ್ಯಮ ಗೋಷ್ಟಿಯಲ್ಲಿ ಪ್ರಕಟಿಸಿದರು.ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಕೊಡಗು ,ಶಿವಮೊಗ್ಗ ನಾಲ್ಕು ಐದನೇ ಸ್ಥಾನದಲ್ಲಿದ್ದು, ಕಳೆದ ಬಾರಿ 22ನೇ ಸ್ಥಾನಕ್ಕೆ ಕುಸಿದಿದ್ದ ಧಾರವಾಡ ಹದಿನೆಂಟನೇ ಸ್ಥಾನ ಪಡೆದಿದೆ.
625ಕ್ಕೆ 625 ಅಂಕ ಪಡೆದು 22 ವಿದ್ಯಾರ್ಥಿಗಳು ಟಾಪರ್ಗಳಾಗಿ ಹೊರ ಹೊಮ್ಮಿದ್ದಾರೆ.ಎಂದಿನಂತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದು ಶೇ. 74ರಷ್ಟು ಫಲಿತಾಂಶ ಸಾಧಿಸಿದ್ದಾರೆ. ಇನ್ನು ಗಂಡು ಮಕ್ಕಳು 58.07 ಪ್ರತಿಶತದಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
22 ಟಾಪರ್ ಗಳ ವಿವರ ಈ ಕೆಳಗಿನಂತಿದೆ.
ಎಂ.ಧನಲಕ್ಷ್ಮೀ -ಸೇಂಟ್ ಯಶ್ಶಾಲೆ, ಬೆಂಗಳೂರು ಉತ್ತರ
ಎಸ್.ಎನ್.ಜಾಹ್ನವಿ – ವಿಜಯ ಭಾರತಿ ವಿದ್ಯಾಲಯ, ಬೆಂಗಳೂರು ದಕ್ಷಿಣ, ಮಧುಸೂಧನ್ ರಾಜ್ -ಎಂ ಇಎಸ್ಕಿಶೋರ ಕೇಂದ್ರ, ಬೆಂಗಳೂರು ಉತ್ತರ, ಅಖಿಲ್ ಅಹ್ಮದ್ ನದಾಫ್-ಆಕ್ಸ್ಫರ್ಡ್ ಶಾಲೆ, ವಿಜಯಪುರ, ಭಾವನಾ -ನೀಲಗಿರೇಶ್ವರ ವಿದ್ಯಾನಿಕೇತನ ಶಾಲೆ, ದೇವನಹಳ್ಳಿ, ಎಸ್.ಧನುಷ್ -ಮರಿಮಲ್ಲಪ್ಪ ಹೈಸ್ಕೂಲ್, ಮೈಸೂರು ಜಿಲ್ಲೆ
ಜೆ.ಧೃತಿ -ಸಾಹುಕಾರ್ ಚಿಕ್ಕನಗೌಡ ಶಾಲೆ, K.R.ಪೇಟೆ, ಮಂಡ್ಯ
ಮೊಹಮ್ಮದ್ ಮಸ್ತೂರ್ -ಚೇತನ ವಿದ್ಯಾಮಂದಿರ, ತುಮಕೂರು
ಮೌಲ್ಯ ಡಿ. ರಾಜ್ -ರಾಷ್ಟ್ರೀಯ ಅಕಾಡೆಮಿ ಶಾಲೆ, ಚಿತ್ರದುರ್ಗ
ಕೆ.ನಮನ – ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ
ನಮಿತಾ -ಮಾತಾ ನ್ಯಾಷನಲ್ಇಂಗ್ಲಿಷ್ಶಾಲೆ, ಬೆಂಗಳೂರು ದಕ್ಷಿಣ
ನಂದನ್ -ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಶಾಲೆ, ಚಿತ್ರದುರ್ಗ
ನಿತ್ಯ ಎಂ.ಕುಲಕರ್ಣಿ -ರಾಮಕೃಷ್ಣ ಇಂಗ್ಲಿಷ್ಶಾಲೆ, ಶಿವಮೊಗ್ಗ
ರಂಜಿತಾ -ಚಂದ್ರಶೇಖರನಾಥ ಸ್ವಾಮೀಜಿ ಶಾಲೆ, ಬೆಂಗಳೂರು ಗ್ರಾಮಾಂತರ
ರೂಪಾ ಪಾಟೀಲ್-ಸರ್ಕಾರಿ ಕಾಂಪೋಸಿಟ್ಪಿಯು ಕಾಲೇಜು, ಬೆಳಗಾವಿ,ಸಹಿಷ್ಣು ಎನ್ – ಆದಿಚುಂಚನಗಿರಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ, ಶಗುಫ್ತಾ ಅಂಜುಮ್ -ಸರ್ಕಾರಿ ಕಾಂಪೋಸಿಟ್ಉರ್ದು ಶಾಲೆ, ಶಿರಸಿ,ಸ್ವಸ್ತಿ ಕಾಮತ್ -ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಶಾಲೆ, ಉಡುಪಿ, ಆರ್.ಎನ್.ತಾನ್ಯಾ – ಬಿಕೆ,ಎಸ್ವಿಬಿ ಶಾಲೆ, ವಿಜಯನಗರ, ಮೈಸೂರು, ಉತ್ಸವ ಪಟೇಲ್ -ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ, ಹಾಸನ, ಯಶ್ವಿತಾ ರೆಡ್ಡಿ -ಚಿರೆಕ್ಪಬ್ಲಿಕ್ಸ್ಕೂಲ್, ಮಧುಗಿರಿ,
ಯುಕ್ತಾ ಎಸ್ -ಹೋಲಿ ಚೈಲ್ಡ್ಇಂಗ್ಲಿಷ್ಶಾಲೆ, ಬೆಂಗಳೂರು ಉತ್ತರ