*ಮದುವೆ ನಿರಾಕರಿಸಿದ್ದಕ್ಕೆ ಕೊಲೆ* – *ಕಾರಿನಲ್ಲಿಯೇ ಮೃತ ದೇಹ ಸಾಗಾಟ*
ಹಾವೇರಿ : ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ನರ್ಸ್ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಯಾಜ್ ಬೆಣ್ಣಿಗೇರಿ ಹಾಗೂ ಆತನಿಗೆ ಸಹಕರಿಸಿದ ಇಬ್ಬರನ್ನು ಹಲಗೇರಿ ಪೊಲೀಸರು ಬಂಧಿಸಿದ್ದಾರೆ.
ಲವ್ ಜಿಹಾದ್ ಗೆ ನರ್ಸ್ ಬಲಿಯಾಗಿದ್ದಾಳೆ ಎಂದು ಹೇಳಲಾಗುತ್ತಿದ್ದು ನಿಶ್ಚಿತಾರ್ಥವಾಗಿದ್ದ ನಯಾಜ್ ಸ್ವಾತಿಗೆ ಮದುವೆಯಾಗಲು ಒತ್ತಾಯಿಸಿತ್ತಿದ್ಧು ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ಧು, ಈತನಿಗೆ ಸಾಥ್ ಕೊಟ್ಟ ಇಬ್ಬರು ಹಿಂದೂ ಯುವಕರಾದ ಮಾಸೂರಿನವರೆ ಆದ ದುರ್ಗಾಚಾರಿ ಬಡಿಗೇರ ಹಾಗೂ ವಿನಾಯಕ ಪೂಜಾರ ಅವರೇ ಇತರ ಇಬ್ಬರು ಆರೋಪಿಗಳಾಗಿದ್ಧು ಚಿತ್ರದುರ್ಗದ ಬಳಿ ಬಂಧಿಸಲಾಗಿದೆ.
ಮಾರ್ಚ್ 3ರಂದು ನಾಪತ್ತೆಯಾಗಿದ್ದ ಸ್ವಾತಿ ಪತ್ತೆಪುರ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ನಯಾಜ್ ಎಂಬಾತ ಪ್ರೀತಿಯ ನಾಟಕವಾಡಿ ಪ್ಲಾನ್ ಮಾಡಿ ಸ್ವಾತಿಯನ್ನು ರಾಣೆಬೆನ್ನೂರಿನ ಸ್ವರ್ಣ ಪಾರ್ಕ್ ಗೆ ಕರೆಸಿಕೊಂಡಿದ್ದ. ಈ ವೇಳೆ ಆತನ ಸ್ನೇಹಿತರಾದ ವಿನಯ್ ಹಾಗೂ ದುರ್ಗಾಚಾರಿ ಕೂಡ ಜೊತೆಗಿದ್ದರು. ಮೂವರು ಸೇರಿ ವಿನಾಯಕನ ಬೆಲೆನೊ ಕಾರಿನಲ್ಲಿ ಸ್ವಾತಿಯನ್ನು ರಟ್ಟಿಹಳ್ಳಿ ಬಳಿಯ ಪಾಳುಬಿದ್ದ ಶಾಲೆಗೆ ಕರೆದೊಯ್ದು ಕತ್ತಿಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ವಿನಾಯಕನ ಕಾರಿನಲ್ಲಿಯೇ ಸ್ವಾತಿಯನ್ನು ಪತ್ತೆಪುರ ಬಳಿಯ ತುಂಗಭದ್ರಾ ನದಿಗೆ ಎಸೆದು ಬಂದಿದ್ದಾರೆ.
ಮೂವರು ಆರೋಪಿಗಳ ತನಿಖೆ ಪೊಲೀಸರು ತೀವ್ರಗೊಳಿಸಿದ್ದಾರೆ.
ಸ್ವಾತಿ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿ ಘಟನೆ ಖಂಡಿಸಿದ್ದಾರಲ್ಲದೇ,ಇದರಲ್ಲಿ ಮೇಲ್ನೋಟಕ್ಕೆ ಲವ್ ಜಿಹಾದ್ ಅಂತ ಅನಿಸುತ್ತದೆ. ಇನ್ನೂ ಕೆಲವರು ಭಾಗವಹಿಸಿರುವದನ್ನು ನೋಡಿದಾಗ ಸಂಪೂರ್ಣ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಇದು ಮೇಲ್ನೋಟಕ್ಕೆ ಪ್ರೇಮ ಪ್ರಕರಣ ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ಜಾಡು ಹಿಡಿದು ತನಿಖೆ ಮಾಡಬೇಕು ಅಂದಾಗ ಮಾತ್ರ ಸತ್ಯ ಹೊರ ಬರಲಿದೆ ಎಂದರು.