*ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಹಾವು ಏಣಿಯಾಟ/ ನಿರ್ದೇಶಕ ಮಂಡಳಿಯಲ್ಲಿ ಸಮ್ಮಿಶ್ರ*
ಧಾರವಾಡ : ತೀವ್ರ ಕುತೂಹಲ ಕೆರಳಿಸಿರುವ ಧಾರವಾಡ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ರವಿವಾರ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು ಚಂದ್ರಕಾಂತ್ ಬೆಲ್ಲದ ಗುಂಪು ಆರಂಭಿಕ ಮುನ್ನಡೆ ಸಾಧಿಸಿದೆ ಎಂದು ತಿಳಿದುಬಂದಿದೆ.
ಅಧ್ಯಕ್ಷ ಸ್ಥಾನಕ್ಕೆ ಇದುವರೆಗಿನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ನಡುವಣ ಹಣಾಹಣಿಯಲ್ಲಿ ಬೆಲ್ಲದ ದೊಡ್ಡ ಅಂತರದಲ್ಲಿ ಮುಂದೆ ಇದ್ದಾರೆ.
ಮಹತ್ವದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಾರೀ ಪೈಪೋಟಿ ನಡೆದಿದ್ದು ಶಂಕರ ಹಲಗತ್ತಿ, ಪ್ರಕಾಶ್ ಉಡಕೇರಿ ಮಧ್ಯೆ ಜಿದ್ದಾಜಿದ್ದಿಯ ಹಾವು ಏಣಿಯಾಟ ಮುಂದುವರೆದಿದೆ.
ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಬಸವಪ್ರಭು ಹೊಸಕೇರಿ,ಉಪಾಧ್ಯಕ್ಷ ಹುದ್ದೆಗೆ ಡಾ.ಸಂಜೀವ ಕುಲಕರ್ಣಿ,
ಸಹ ಕಾರ್ಯದರ್ಶಿ ಶಂಕರ ಕುಂಬಿ,
ಕೋಶಾಧ್ಯಕ್ಷ ಸ್ಥಾನಕ್ಕೆ ಸತೀಶ್ ತುರಮರಿ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.
ಏಳು ಸಾಮಾನ್ಯರಿಗೆ ಮೀಸಲಾದ ನಿರ್ದೇಶಕ ಸ್ಥಾನಗಳ ಪೈಕಿ ಗುರು ಹಿರೇಮಠ, ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡಿನ, ಶಿವಾನಂದ ಭಾವಿಕಟ್ಟಿ, ಸಂತೋಷ್ ಪಟ್ಟಣಶೆಟ್ಟಿ, ವಿಶ್ವನಾಥ್ ಅಮರಶೆಟ್ಟಿ
ಮಹಿಳಾ ಮೀಸಲು ಸ್ಥಾನದಲ್ಲಿ ವಿಶ್ವೇಶ್ವರಿ ಹಿರೇಮಠ ,
ಎಸ್ ಸಿ ಮೀಸಲು ಹಾಜವಗೋಳ ಉತ್ತಮ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ
ಒಟ್ಟೂ 44 ಅಭ್ಯರ್ಥಿಗಳು ಕಣದಲ್ಲಿದ್ದು, 9104 ಸದಸ್ಯರ ಪೈಕಿ ಶೇಕಡಾ ಐವತ್ತು ಸದಸ್ಯರು ಮತ ಚಲಾಯಿಸಿದ್ದು ಬೆಳಿಗ್ಗೆ ಮಾತು ಎಣಿಕೆ ಆರಂಭವಾಗಿದ್ದು ಸಂಜೆ ಐದರ ನಂತರ ಅಧಿಕೃತ ಫಲಿತಾಂಶ ಹೊರಬೀಳಲಿದೆ.