*ಗಂಗಾವತಿ ಸಿಲ್ಕ್ ಪ್ಯಾಲೇಸ್ ಪ್ರಾಯೋಜಿತ ಹಾಸ್ಯ ನಾಟಕ* / *ಜನಪ್ರಿಯ ಟೆಲಿವಿಷನ್ ಜೋಡಿ ಸುಂದರ, ವೀಣಾ ಸುಂದರ್ ರಂಗದ ಮೇಲೆ* / *ಯಶವಂತ ಸರದೇಶಪಾಂಡೆ ನಟನೆ,ನಿರ್ದೇಶನ*
ಧಾರವಾಡ :ಕನ್ನಡ ರಂಗಭೂಮಿಯಲ್ಲಿ ಸ್ವಚ್ಛ, ಸುಂದರ, ಹಾಸ್ಯವನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಖ್ಯಾತರಾಗಿರುವ ಡಾ.ಯಶವಂತ ಸರದೇಶಪಾಂಡೆ ತಂಡ ‘ಅಮರ ಮಧುರ ಪ್ರೇಮ’ ಎಂಬ ಹೊಸ ನಾಟಕವನ್ನು ಎಪ್ರಿಲ್ 20 ಭಾನುವಾರ ಸಂಜೆ 6:15 ಕ್ಕೆ ಸೃಜನಾ ರಂಗಮಂದಿರದಲ್ಲಿ ಪ್ರದರ್ಶಿಸಲಿದೆ.
ಗಂಗಾವತಿ ಸಿಲ್ಕ್ ಪ್ಯಾಲೇಸ್ ಪ್ರಾಯೋಜಿತ ನಾಟಕದ ಬಗ್ಗೆ ಮಾತನಾಡಿದ ಡಾ. ಯಶವಂತ ಸರದೇಶಪಾಂಡೆ
ನಮ್ಮ ತಂಡವು ‘ಅಮರ ಮಧುರ ಪ್ರೇಮ’ ಎಂಬ ಹೊಸ ನಾಟಕವನ್ನು ತಯಾರಿಸಿದೆ. ಹಿರಿಯ ನಾಗರಿಕರ ಸುತ್ತ ಹೆಣೆದ ಈ ನಾಟಕ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ ಆಯೋಜನೆಯ ಗಂಗಾವತಿ ರೇಷ್ಮೆ ರಂಗೋತ್ಸವದ ಭಾಗವಾಗಿ ಮತ್ತು ಜೋಶಿಸ್ ಆಕ್ಟೋಸ್ಕೋಪ ಸಹಯೋಗದಲ್ಲಿ ಈ ಪ್ರದರ್ಶನ ನಡೆಯಲಿದೆ ಎಂದರು.
ವಯೋವೃದ್ಧರ ವಿವಾಹ ಪ್ರಸಂಗದ, ಸಮೃದ್ಧ ಸಂಭಾಷಣೆಯ, ಸುಂದರ ಹಾಸ್ಯ ನಾಟಕ ‘ಅಮರ ಮಧುರ ಪ್ರೇಮ’, ಕನ್ನಡ ಟೆಲಿವಿಷನ್ ಲೋಕದ ಜನಪ್ರಿಯ ಜೋಡಿ
ಚಲನಚಿತ್ರಗಳಲ್ಲೂ ಹೆಸರು ಮಾಡಿರುವ ವೀಣಾ ಮತ್ತು ಸುಂದರ ಅವರು ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಮರಾಠಿಯಲ್ಲಿ ಪ್ರಸಿದ್ಧ ನಾಟಕಕಾರ ಹೇಮಂತ ಎದಲಬಾದಕರ್ ಬರೆದದ್ದನ್ನು ಕನ್ನಡಕ್ಕೆ ಅನುವಾದಿಸಿ, ನಟಿಸಿ, ನಿರ್ದೇಶಿಸಿದ್ದಾರೆ ಡಾ. ಸರದೇಶಪಾಂಡೆ,
ರಂಗ ಸಜ್ಜಿಕೆ, ಹಿನ್ನೆಲೆ ಸಂಗೀತ, ಶೀರ್ಷಕ ಗೀತೆ, ವಸ್ತ್ರವಿನ್ಯಾಸ, ಬೆಳಕು ಸಂಯೋಜನೆಗಳು ಸರಳ ಮತ್ತು ಆಕರ್ಷಕವಾಗಿವೆ. ಪ್ರವೀಣ್ ಡಿ ರಾವ್ ಅವರ ಸಂಗೀತ, ಜೀವನ್ ಫನಾರ್ಂಡಿಸ್, ಪ್ರದೀಪ ಮುಧೋಳ ಅವರುಗಳ ಮಾಡಿದ್ದಾರೆ, ರಂಗಸಜ್ಜಿಕೆ ಮತ್ತು ವ್ಯವಸ್ಥೆ, ನಾಗರಾಜ ಪಾಟೀಲ್ ಅವರ ಬೆಳಕು ವಿನ್ಯಾಸ ಆಕರ್ಷಕವಾಗಿವೆ.
ಈಗಾಗಲೇ ರಾಜಧಾನಿಯ ರಂಗರಸಿಕರ ಜನಮನ ಗೆದ್ದಿರುವ ‘ಅಮರ ಮಧುರ ಪ್ರೇಮ’ ಸುಂದರ ಹಾಸ್ಯ ನಾಟಕ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಗಂಗಾವತಿ ರೇಷ್ಮೆ ರಂಗೋತ್ಸವದ ಪ್ರಮುಖ ಕಾರ್ಯಕ್ರವಾಗಿ ಪ್ರದರ್ಶಿತವಾಗಲಿದೆ. ನಾಟಕ ನೋಡಲು ಬಂದಂತಹ ಅದೃಷ್ಟವಂತ ಪ್ರೇಕ್ಷಕ ಮಹಾನುಭಾವರಿಗೆ ಸಾವಿರಾರು ರೂಪಾಯಿ ಬೆಲೆಯ ಸಿಲ್ಕ್ ಸೀರೆಯ ಉಡುಗೊರೆ ನೀಡಲಾಗುತ್ತದೆ. ಪ್ರೇಕ್ಷಕರನ್ನು ರಂಗಮಂದಿರಗಳ ಕಡೆಗೆ ಮತ್ತೆ ಕರೆತರುವುದಕ್ಕೆ ಇದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಗಂಗಾವತಿ ಸಿಲ್ಕ್ ಪ್ಯಾಲೇಸ್ ಮಾಲೀಕ ಆನಂದ ಕಮತಗಿ ಹೇಳುತ್ತಾರೆ.
ಗೋಷ್ಠಿಯಲ್ಲಿ ವೀಣಾ ಸುಂದರ, ಸುಂದರ, ಡಾ ಪವನ ಜೋಶಿ ಇದ್ದರು .