*ಕಾರ್ಯಕಾರಿಣಿಯಲ್ಲಿ ಇಪ್ಪತ್ತು ಹಿರಿಯರು, ಕ್ರೀಯಾಶೀಲ ಮುಖಂಡರಿಗೆ ಮಣೆ* / *ಯುವ, ಮಹಿಳಾ ತಂಡದಲ್ಲಿಯೂ ಹೆಚ್ಚಿನ ಪ್ರಾತಿನಿಧ್ಯ*
ಹುಬ್ಬಳ್ಳಿ : ರಾಜ್ಯದ ಸಮಸ್ತ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಲ್ಲದೆ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ರಚಿಸಲ್ಪಟ್ಟ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ನಾಟಕ ರಾಜ್ಯ ಎಸ್. ಎಸ್.ಕೆ. ಸಮಾಜದ ಆಡಳಿತ ಮಂಡಳಿಯಲ್ಲಿ ಈ ಬಾರಿ ಹುಬ್ಬಳ್ಳಿ ಧಾರವಾಡದ ಸಮಾಜ ಬಾಂಧವರಿಗೆ ಬಂಪರ್ ಅವಕಾಶ ದೊರೆತಿದೆ.
ರಾಜ್ಯದಲ್ಲಿ ಸಮಾಜದ 4.60 ಲಕ್ಷ ಜನಸಂಖ್ಯೆಯಲ್ಲಿ “ಎಸ್ ಎಸ್ ಕೆ ರಾಜಧಾನಿ ” ಹಿರಿಮೆಯ ಹುಬ್ಬಳ್ಳಿ ಧಾರವಾಡದಲ್ಲಿಯೇ 1.80 ಲಕ್ಷ ಇದ್ದು ಹಿರಿಮೆ ಇದ್ದು ಕಾರ್ಯಕಾರಣಿ ಸಮಿತಿಯಲ್ಲಿ ಇಪ್ಪತ್ತು ಜನ ಸಮುದಾಯದ ಹಿರಿಯರು ಹಾಗೂ ಕ್ರೀಯಾಶೀಲ ಮುಖಂಡರಿಗೆ ಮಣೆ ಹಾಕಲಾಗಿದೆ.
ಸಂಸ್ಥೆಯಲ್ಲಿ ಪ್ರತಿ ಬಾರಿ ಹುಬ್ಬಳ್ಳಿ ಧಾರವಾಡದವರಿಗೆ ಪ್ರಾತಿನಿಧ್ಯ ದೊರೆಯುತ್ತಿತ್ತಾದರೂ ಹಾಲಿ ಅಧ್ಯಕ್ಷರಾದ ಹರಿಹರ ಮೂಲದ ಡಾ. ಶಶಿಕುಮಾರ್ ಮೆಹರವಾಡೆ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಲ್ಲರನ್ನೂ ಸೇರ್ಪಡೆ ಮಾಡಿ ಅವಳಿನಗರದ ಅಲ್ಲದೆ, ರಾಜ್ಯದಲ್ಲಿ ಸಂಘ ಮತ್ತಷ್ಟು ವಿಸ್ತರಣೆ ಮಾಡುವ ಪ್ರಯತ್ನ ಮಾಡಿದ್ದಾರೆ.ಯುವ ಸಮಿತಿ ಮತ್ತು ಮಹಿಳಾ ಘಟಕಕ್ಕೆ ಸಹ ಭವಿಷ್ಯದ ಭರವಸೆಗಳಿಗೆ ಸ್ಥಾನ ನೀಡಿದ್ದಾರೆ.
ಗೌರವ ಸಲಹೆಗಾರರಾಗಿ ನಿಕಟ ಪೂರ್ವ ಅಧ್ಯಕ್ಷ,ಮಾಜಿ ಶಾಸಕ ಅಶೋಕ್ ಕಾಟವೆ, ಉಪಾಧ್ಯಕ್ಷರಾಗಿ ಹುಬ್ಬಳ್ಳಿ ಧಾರವಾಡದ ಕೇಂದ್ರ ಪಂಚ ಕಮೀಟಿ ಚೀಪ್ ಟ್ರಸ್ಟಿ ಸತೀಶ್ ಮೆಹರವಾಡೆ, ಹಿರಿಯ ಉದ್ಯಮಿ ಟಿ.ಎಂ.ಮೆಹರವಾಡೆ,
ಎಸ್.ಎಸ್.ಕೆ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಲದವಾ, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಬುದ್ದಿ, ಕಾರ್ಯದರ್ಶಿಗಳಾಗಿ ಕೇಂದ್ರ ಪಂಚ ಕಮೀಟಿ ಉಪ ಮುಖ್ಯ ಧರ್ಮದರ್ಶಿ ಭಾಸ್ಕರ ಜಿತೂರಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ, ನಿರ್ದೇಶಕರಾಗಿ ಮಾಜಿ ಚೀಪ್ ಟ್ರಸ್ಟಿ ನೀಲಕಂಠ ಜೋಡಿ, ಉದ್ಯಮಿಗಳಾದ ನಾರಾಯಣ ನಿರಂಜನ, ಎನ್.ಎನ್.ಖೋಡೆ, ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ, ನಾರಾಯಣ ಜರತಾರಘರ, ಕಾಶೀನಾಥ್ ಖೋಡೆ, ಹನುಮಂತಸಾ ನಿರಂಜನ, ಗುರುನಾಥ್ ರಾಯಭಾಗಿ, ಯಲ್ಲಪ್ಪ ಬುದ್ದಿ, ಸುನೀಲ್ ವಾಳವೇಕರ, ಅಶೋಕ್ ಬಸವಾ, ಗಣಪತಿಸಾ ಹಬೀಬ್ ಮತ್ತು ಎನ್ಜಿಇಎಫ್ ಮಾಜಿ ಅಧ್ಯಕ್ಷ ರಂಗಾ ಬದ್ದಿ ಇವರನ್ನು ಆಯ್ಕೆ ಮಾಡಲಾಗಿದೆ. ಬಹುತೇಕರು ಕಳೆದ ಮೂರ್ನಾಲ್ಕು ದಶಕಗಳಿಂದ ಸಾಮಾಜಿಕ ಮತ್ತು ಸಮಾಜದ ಉನ್ನತಿಗಾಗಿ ಶ್ರಮಿಸಿದವರಾಗಿದ್ದಾರೆ.
ರಾಜ್ಯ ಯುವ ಸಮಿತಿಗೂ ನಿರ್ದೇಶಕರಾಗಿ ವೆಂಕಟೇಶ್ ಅಶೋಕ್ ಕಾಟವೆ, ಯೋಗೇಶ್ ಹಬೀಬ್, ಪ್ರಕಾಶ್ ಬುರಬುರೆ, ರಾಜು ಜರತಾರಘರ, ಅರವಿಂದ್ ಮೆಹರವಾಡೆ, ಸಾಯಿನಾಥ್ ದಲಬಂಜನ, ಪ್ರಕಾಶ್ ಚವ್ಹಾಣ, ಮಿಥುನ ಚವ್ಹಾಣ, ರಾಘವೇಂದ್ರ ಮೆಹರವಾಡೆ ನಿಯುಕ್ತಿ ಗೊಂಡಿದ್ದಾರೆ.
ಮಹಿಳಾ ತಂಡದಲ್ಲಿಯೂ ರಾಜಶ್ರೀ ಜಡಿ, ಪುಷ್ಪ ಪವಾರ್, ಸರಳಾ ಭಾಂಡಗೆ, ಅನ್ನಪೂರ್ಣ ಭಾಂಡಗೆ, ಸೀಮಾ ಲದವಾ, ಶೋಭಾ ಜರತಾರಘರ, ಲಕ್ಷ್ಮೀಬಾಯಿ ಮೆಹರವಾಡೆ,ರೂಪಾ ಚೌದರಿ ಆಯ್ಕೆ ಮಾಡಲಾಗಿದೆ.
ರಾಜ್ಯ ಮಟ್ಟದ ವಿವಿಧ ಘಟಕಗಳ ಮುಖ್ಯಸ್ಥರಾಗಿ ರಾಮಚಂದ್ರ ಹಬೀಬ್, ಎಂ.ಟಿ.ಪವಾರ, ರಾಜೇಶ್ ಜಡಿ, ಪರಶುರಾಮ ಊಟವಾಲೆ ಇವರುಗಳನ್ನು ನೇಮಕ ಮಾಡಲಾಗಿದೆ.
‘ಎಸ್. ಎಸ್. ಕೆ. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ರಚಿಸಲ್ಪಟ್ಟ ಕರ್ನಾಟಕ ರಾಜ್ಯ ಎಸ್. ಎಸ್. ಕೆ. ಸಮಾಜ ಕಾರ್ಯಕಾರಣಿ ಸಮಿತಿಯಲ್ಲಿ ಹುಬ್ಬಳ್ಳಿ ಧಾರವಾಡಕ್ಕೆ ವಿಶೇಷ ಆದ್ಯತೆ ನೀಡಿದ್ದು, ಸಂಘಟನೆ ಮತ್ತಷ್ಟು ಬಲಗೊಳಿಸುವ ಗುರಿ ಹೊಂದಲಾಗಿದೆ.’
*ಭಾಸ್ಕರ ಜಿತೂರಿ*, ಕಾರ್ಯದರ್ಶಿ
‘ಎಬಿಎಸ್ ಎಸ್ ಕೆ ಸಂಘಟನೆಗೆ ಹಿರಿದಾದ ಇತಿಹಾಸವಿದೆ. ಹರೀಸಾ ಖೋಡೆಯಂತಹ ಗಣ್ಯರು ಮುನ್ನಡೆಸಿದ್ದಾರೆ. ಪ್ರಾಂತೀಯ ಘಟಕ ರಚನೆಯಾದ ನಂತರ ಎರಡನೇ ಅಧ್ಯಕ್ಷರಾಗಿರುವ ಡಾ.ಶಶಿಕುಮಾರ ಅವಳಿ ನಗರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದು, ಸಂಸ್ಥೆ ಬಲಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.’
*ಬಾಳು ಮಗಜಿಕೊಂಡಿ*, ನಿರ್ದೇಶಕರು,