*ಉಗ್ರವಾದ ನಡೆದರೆ ತಕ್ಕ ಪ್ರತ್ಯುತ್ತರ – ಪಾಕ್ ಗೆ ಎಚ್ಚರಿಕೆ / ದೇಶದ ಜನತೆ ಉದ್ದೇಶಿಸಿ ಪ್ರಧಾನಿ ಭಾಷಣ*
ಹೊಸದಿಲ್ಲಿ : ಆಪರೇಷನ್ ಸಿಂಧೂರ ಎನ್ನುವುದು ಕೇವಲ ಹೆಸರಲ್ಲ, ನ್ಯಾಯದ ಅಖಂಡ ಪ್ರತಿಜ್ಞೆ. ಇದು ಇನ್ನು ಮುಗಿದಿಲ್ಲ ಸದ್ಯಕ್ಕೆ ನಿಂತಿದೆ ಎಂದು ಪಾಕಿಸ್ತಾನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಎಚ್ಚರಿಕೆ ನೀಡಿದರು.
ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಇಂದು ರಾತ್ರಿ ದೇಶದ ಜನತೆ ಉದ್ದೇಶಿಸಿ ಮಾತನಾಡಿದ ಅವರು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಳಿಕ ಆಪರೇಷನ್ ಸಿಂಧೂರ್ ನಡೆದಿದೆ. ಉಗ್ರವಾದ ಮತ್ತೆ ನಡೆದರೆ ನಮ್ಮದೇ ರೀತಿಯಲ್ಲಿ ಉತ್ತರಿಸುತ್ತೇವೆ. ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗುವುದಿಲ್ಲ ಈ ಬೆದರಿಕೆ ನಾವು ಸರಿಯಾದ ಉತ್ತರವನ್ನೇ ಕೊಡುತ್ತೇವೆ.ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಮರಳಿಸುವ ಕುರಿತು ಮಾತ್ರ ಪಾಕಿಸ್ತಾನದ ಜೊತೆ ಮಾತುಕತೆ ಎಂದು ಹೇಳಿದರು.
ಪಹಲ್ಗಾಮ್ನಲ್ಲಿ ಧರ್ಮವನ್ನು ಕೇಳಿ ಅಮಾಯಕರನ್ನು ಕೊಂದಿದ್ದಾರೆ. ಹೆಂಡತಿ, ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ಭಾರತದ ಹೆಣ್ಣು ಮಕ್ಕಳ ಸಿಂಧೂರ ಅಳಿಸಿ ಹಾಕಿದವರಿಗೆ ತಕ್ಕ ಪಾಠ ಕಲಿಸಿದ್ದೇವೆ. ಉಗ್ರವಾದಿಗಳು ಇದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಉಗ್ರರನ್ನು ಸರ್ವನಾಶ ಮಾಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಲಾಯಿತು ಎಂದು ಹೇಳಿದರು.
ಉಗ್ರರ ಮಟ್ಟ ಹಾಕುವ ಬದಲು ಪಾಕಿಸ್ತಾನ ನಮ್ಮ ಮೇಲೆಯೇ ದಾಳಿ ಮಾಡಲು ಪ್ರಯತ್ನಿಸಿತು. ಪಾಕಿಸ್ತಾನ ಉಗ್ರರಿಗೆ ಬೆಂಬಲ ಕೊಡುತ್ತಿದೆ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ, ನಮ್ಮ ಗುರುದ್ವಾರ, ಶಾಲಾ – ಕಾಲೇಜು, ಮಂದಿರ ಹಾಗೂ ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪಾಕ್ ಮುಂದಾಯಿತು. ಆದರೆ, ಅದರಲ್ಲೂ ಪಾಕ್ ವಿಫಲವಾಯಿತು. ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಅಲ್ಲದೆ ಉಗ್ರರು ಅಡಗಿದ್ದ ಸ್ಥಳಗಳನ್ನು ಧ್ವಂಸ ಮಾಡಲಾಗಿದೆ. ಈ ಆಪರೇಷನ್ ಸಿಂದೂರ ದೇಶದ ಪ್ರತಿ ತಾಯಿ, ಸಹೋದರರಿಗೆ ಅರ್ಪಣೆ, ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ನಮನ ಸಲ್ಲಿಸುವೆ, ಆಪರೇಷನ್ ಸಿಂಧೂರ ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಪಾಕಿಸ್ತಾನ ಗಡಿಯಲ್ಲಿ ಯುದ್ಧಕ್ಕೆ ಸಿದ್ಧವಾಗಿತ್ತು.ಆದರೆ ಭಾರತ ಅವರ ತಲೆಯ ಮೇಲೆಯೇ ಹೊಡೆದಿದೆ. ನಾವು ಉಗ್ರರ ಕೇಂದ್ರ ಸ್ಥಾನಗಳನ್ನು ದ್ವಂಸಗೊಳಿಸಿದ್ದೇವೆ. ಡ್ರೋನ್ ಗಳಿಂದ ಪಾಕಿಸ್ತಾನ ಏರ್ ಬೇಸ್ ಗಳ ಮೇಲೆ ಭಾರತದ ದಾಳಿ ಮಾಡಿದೆ. ಜಗತ್ತು ನೋಡಿದೆ ಹೇಗೆ ಪಾಕಿಸ್ತಾನ ಡ್ರೋನ್ ಗಳು ಮೆಸೇಲ್ ಗಳು ತರಗೆಲೆಗಳಂತೆ ಉದುರಿ ಹೋಗಿದ್ದಾವೆ ಎನ್ನುವುದನ್ನು ನೋಡಿದೆ. ಪಾಕಿಸ್ತಾನ ನಮ್ಮನ್ನು ಕಾಪಾಡಿ ಎಂದು ಜಗತ್ತಿನ ಮುಂದೆ ಅಂಗಲಾಚಿತ್ತು. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರು ಹಾಕಿದೆ ಎಂದರು.