ಯತ್ನಾಳ್ ಕ್ಷಮೆ ಕೇಳಲು ಪಟ್ಟು*
ಸಭೆಯಲ್ಲಿ ಕಾಶಪ್ಪನವರ್, ನಿರಾಣಿ, ಲಿಂಬಿಕಾಯಿ, ಅಕ್ಕಿ , ಪ್ರಭಣ್ಣ ಸಹಿತ ಪ್ರಮುಖ ಮುಖಂಡರು ಭಾಗಿ
ಹುಬ್ಬಳ್ಳಿ : ಜಯಮೃತ್ಯುಂಜಯ ಸ್ವಾಮೀಜಿಗಳ ನಡೆಯನ್ನು ಲಿಂಗಾಯತ ಪಂಚಮಸಾಲಿ ಸಮಾಜ ಒಪ್ಪಲ್ಲ.ಸ್ವಾಮೀಜಿಗಳು ಸಮಾಜದ ಹಿತದೃಷ್ಠಿಗಾಗಿ ಹೋರಾಟ ಮಾಡುತ್ತಿಲ್ಲ.ಒಂದು ವಾರಗಳ ಕಾಲ ಸ್ವಾಮೀಜಿಗಳಿಗೆ ಗಡುವು ನೀಡಲಾಗುವುದು.
ಒಂದು ವಾರದೊಳಗಾಗಿ ತಮ್ಮನಡೆ ಸರಿಪಡಿಸಿಕೊಳ್ಳದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಪದಾಧಿಕಾರಿಗಳು ಗಡುವು ನೀಡಿದರು.
ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಮೋಹನ್ ಲಿಂಬಿಕಾಯಿ, ಎಂ.ಎಸ್.ಅಕ್ಕಿ ಸೇರಿದಂತೆ ಸಮಾಜದ ಪ್ರಮುಖರ ಸಭೆ ಇಂದು ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ಮಾಧ್ಯಮದವರೊಂದಿಗೆ ಮಾತನಾಡಿದ ಕಾಶಪ್ಪನವರ್ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬಹು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ. ಸ್ವಾಮೀಜಿ
ಒಬ್ಬ ವ್ಯಕ್ತಿಯ ಒಬ್ಬ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ.
ಗುರುಗಳಾದವರು ಸಮಾಜದ ಹಿತವನ್ನ ಕಾಯಬೇಕು.
ಅದನ್ನು ಬಿಟ್ಟು ಒಬ್ಬ ವ್ಯಕ್ತಿಯ ಪರವಾಗಿ ಈರೀತಿ ನಡೆದುಕೊಳ್ಳುತ್ತಿರುವುದು ಸಮಾಜ ಸಹಿಸುವುದಿಲ್ಲ. ವೈಯಕ್ತಿಕವಾಗಿ ಸಮಾಜದ, ಟ್ರಸ್ಟ್ ನ ಹಿರಿಯರ ಬಗ್ಗೆ ಮಾತನಾಡಿಸುವುದು ಸರಿಯಲ್ಲ.ನಾಯಿ,ನರಿ, ಹಂದಿಗಳಿಂದ ಮಾತನಾಡಿಸುವುದಲ್ಲ.
ಯಾವುದೋ ನಾಯಿ, ನರಿಗಳಿಂದ ಹೇಳಿಕೆ ಕೊಡಿಸುವ ಸ್ವಾಮೀಜಿಗಳ ನಡೆ ಸಮಾಜಕ್ಕೆ ವ್ಯತಿರಿಕ್ತವಾದುದು.
ಸ್ವಾಮೀಜಿಗಳು ತಮ್ಮ ನಡೆಯನ್ನ ಬದಲಾಯಿಸಿಕೊಳ್ಳಬೇಕು.
ತಮ್ಮನಡೆ ಬದಲಾಯಿಸುವ ಕೊಳ್ಳದಿದ್ದಲ್ಲಿ ಸಮಾಜದ ಹಿರಿಯರಿಂದ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲಾಗುವುದು 2 ಡಿ 2 ಸಿ ವಿಚಾರದಲ್ಲಿ ಬಹುದೊಡ್ಡ ಡೀಲ್ ಬಗ್ಗೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೂಡ ಸಮಾಜದ ಹಿರಿಯರ ಸಮ್ಮುಖದಲ್ಲಿ ಗಂಭೀರ ಚರ್ಚೆ ಮಾಡಲಾಗುವುದು ಎಂದರು. ಪಂಚಮಸಾಲಿ ಮುಖಂಡ ಮೋಹನ ಲಿಂಬಿಕಾಯಿ ಮಾತನಾಡಿ
ಸ್ವಾಮಿಗಳು ರಾಜಕೀಯ ಪಕ್ಷ, ವ್ಯಕ್ತಿ ಪರವಾಗಿ ಮಾತನಾಡಬಾರದು ಅಂತ ಹೇಳಿದ್ವಿ.
ಸಮಾಜದ ಪ್ರಮುಖರ ಸಭೆಯನ್ನ ನಾವು ಕರೆದು ಚರ್ಚೆ ಮಾಡಿ ಉಚ್ಚಾಟನೆ ಬಗ್ಗೆ ನಿರ್ಣಯ ಕೈಗೊಳ್ತೆವೆ ಅಂದಿದ್ವಿ
ಆದ್ರೆ ಪತ್ರಿಕಾಗೋಷ್ಠಿಯಲ್ಲಿ ಯತ್ನಾಳ್ ಅವರು ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹಾಗೂ ಟ್ರಸ್ಟ್ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ.ಅದಕ್ಕೆ ಸ್ಪಷ್ಟಿಕರಣ ನೀಡೋದಕ್ಕೆ ನಾವು ಸೇರಿದ್ದೇವೆ.ಸಮಾಜ ಸಂಘಟನೆ, ಮೀಸಲಾತಿ ಬಗ್ಗೆ ಸಕ್ರಿಯವಾಗಿ ಭಾಗಿಯಾದವರು ವಿಜಯಾನಂದ ಕಾಶಪ್ಪನವರ
ಆರು ಎಕರೆ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ
2009ರಲ್ಲಿ ಸೋಮಣ್ಣ ಎಂಬುವವರ ಜಮೀನು ಟ್ರಸ್ಟ್ ನ ಪದಾಧಿಕಾರಿಗಳು ಟ್ರಸ್ಟ್ ಹೆಸರಲ್ಲೇ ಖರೀದಿ ಮಾಡಿದ್ದಾರೆ
ಅವರ 2 ಎಕರೆ ಕೂಡ ಟ್ರಸ್ಟ್ ಹೆಸರಲ್ಲಿ ಖರೀದಿ ಮಾಡೋವಾಗ ಕಾನೂನು ತೊಂದರೆ ಬಂತು
ಇವತ್ತಿನವರೆಗೂ ಟ್ರಸ್ಟ್ ನ ಕಬಜಾದಲ್ಲೇ ಜಮೀನು ಇದೆ
ಟ್ರಸ್ಟ್ ದುಡ್ಡು ದುರುಪಯೋಗ ಮಾಡಿದ್ದಾರೆ ಅಂತ ಆರೋಪ
ಯಡಿಯೂರಪ್ಪ 1 ಕೋಟಿ ಕೊಟ್ಟಿದ್ರು ಶಿವಾನಂದ ಅವರಿಗೆ ಜವಾಬ್ದಾರಿ ನೀಡಿ ಕಟ್ಟಡ ಕಟ್ಟಲಾಗಿದೆ
ಟ್ರಸ್ಟ್ ನ 15 ಲಕ್ಷ ಹಣವನ್ನ ಲ್ಯಾಂಡ್ ಅಲೋಟ್ಮೆಂಟ್ ಆಗಿರೋದಕ್ಕೆ ದುಡ್ಡು ಖರ್ಚು ಆಗಿದೆ
ಗದಗಿನಲ್ಲಿ ಟ್ರಸ್ಟ್ ಹೆಸರಲ್ಲಿ ಆಸ್ತಿ ತಗೊಂಡು ವ್ಯಯಕ್ತಿಕ ಬಳಕೆ ಆರೋಪ ಮಾಡಿದ್ದಾರೆ
ಸರ್ಕಾರದ ಒಂದೂ ರೂಪಾಯಿ ಕೂಡ ಗದಗಿನ ಜಮೀನಿಗೆ ಬಂದಿಲ್ಲ.ಹಿರಿಯರಿಗೆ ಅವಾಚ್ಯ ಶಬ್ದದಿಂದ ಬೈದಿದ್ದು ಬಹಳ ನೋವಾಗಿದೆ.ಯತ್ನಾಳ್ ಅವರೇ ಸಾರ್ವಜನಿಕವಾಗಿ ನೀವು ಕ್ಷಮೆ ಕೇಳಬೇಕು.ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳೋದು ಅನಿವಾರ್ಯ ಆಗುತ್ತದೆ ಎಂದರು.
ಪೀಠದಿಂದ ಪೀಠಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನಾಭಿಪ್ರಾಯ ಬಂದಿದೆ
ಅದನ್ನ ಸರಿ ಪಡಿಸಲು ಇಂದು ಸಭೆ ಮಾಡಲಾಗಿದೆ
ಪಕ್ಷತೀತವಾಗಿ ಸಮಾಜದ ಹಿರಿಯರನ್ನ ಕುಡಿಸಿ ತಿಳುವಳಿಕೆ ಹೇಳಬೇಕು ಅನ್ನೋ ಉದ್ದೇಶದಿಂದ 100 ಜನ ಪ್ರಮುಖರನ್ನ ಕರೆಯಬೇಕು ಅಂತ ನಿರ್ಧಾರ ಮಾಡಿದ್ದೇವೆ
ಒಂದು ವಾರದೊಳಗಾಗಿ ಸಭೆ ಮಾಡಲು ಎರಡೂ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲು ಚರ್ಚೆ ಆಯ್ತು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಮುಖ್ಯವಾಗಿ ಸಮಾಜದಲ್ಲಿನ ಭಿನ್ನಾಭಿಪ್ರಾಯ ವನ್ನು ಸರಿ ಪಡಿಸಲು, 2ಎ ಮೀಸಲಾತಿ ಸೇರಿ ಹಲವು ವಿಷಯಗಳ ಬಗ್ಗೆ ಸಭೆ ಮಾಡಲು ವಿಚಾರ ಮಾಡಿದ್ದೇವೆ
ಯಾವುದೇ ಸ್ವಾಮೀಜಿಗಳು ಸಹ ಸಭೆಗೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.ನಾವು ವಿಜಯೇಂದ್ರ ಅವರು ದೂರ ದೂರ ಇದ್ವಿ, ಈಗ ಒಂದಾಗಿದ್ದೇವೆ.ಮುಂದೆ ಯತ್ನಾಳ್ ನಾವು ಒಂದೇ ಗಾಡಿಯಲ್ಲಿ ತಿರುಗಾಡ ಬಹುದು.ವಿಜಯೇಂದ್ರ ರಾಜ್ಯದ ಅಧ್ಯಕ್ಷರು ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಹೀಗೆ ಮುಂದೆ ಕೂಡ ಅವರೇ ಮುಂದುವರೆಯುತ್ತಾರೆ.ನಮ್ಮಲ್ಲಿ ಬಣ ಇಲ್ಲಾ ನಾವೆಲ್ಲಾ ಒಂದೆ ಎಂದು ಯತ್ನಾಳ್ ಬಗ್ಗೆ ಹೇಳದರು.