*ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣ / ಎಲ್ಲರೂ ಅಭಿಪ್ರಾಯ ನೀಡಲು ಸಿಎಂ ಸೂಚನೆ*
ಬೆಂಗಳೂರು : ಇಂದು ಸುಮಾರು ಮೂರು ಗಂಟೆಗಳ ಕಾಲ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವಿಚಾರ ಚರ್ಚೆಗೆ ಬಂದಿತಾದರೂ ಆದರೆ ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದೂಡಲ್ಪಟ್ಟಿದೆ.
ಜಾತಿ ಗಣತಿಗೆ ಯಾವುದೇ ಸಚಿವರೂ ವ್ಯಕ್ತಪಡಿಸಿಲ್ಲ. ಎಲ್ಲರೂ ಅವರವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಚರ್ಚೆ ಅಪೂರ್ಣವಾಗಿದ್ದು ಮುಂದಿನ ಸಂಪುಟ ಸಭೆಯಲ್ಲಿ ಅಥವಾ ಇನ್ನೊಂದೆರಡು ಸಭೆಗಳಲ್ಲಿ ಅಂತಿಮ ಗೊಳ್ಳಲಿದೆ ಎಂದು ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್, ಚೆಲುವರಾಯಸ್ವಾಮಿ, ಎಂ.ಬಿ.ಪಾಟೀಲ , ಕೆ.ಎಚ್.ಮುನಿಯಪ್ಪ ಮುಂತಾದವರು ಮಾಧ್ಯಮಗಳ ಮುಂದೆ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆ ಸಚಿವರು ಏರಿದ ದನಿಯಲ್ಲಿ ಮಾತನಾಡಿದಾಗ ಎಲ್ಲರಿಗೂ ಲಿಖಿತ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದರೆನ್ನಲಾಗಿದೆ.
ಸಿಎಂ ಮಾಧ್ಯಮಗಳ ಮುಂದೆ ಯಾವುದೇ ಅಭಿಪ್ರಾಯ ಹಂಚಿಕೊಂಡಿಲ್ಲವಾಗಿದ್ದು ಕಾನೂನು ಸಚಿವ ಎಚ್.ಕೆ.ಪಾಟೀಲ ಎಲ್ಲಾ ವಿವರ ನೀಡುವುದೆಂದರು.ಸಚಿವ ಪಾಟೀಲ್ ಇಂದಿನ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದ್ದು ಮೆ. 2ರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಈಗಾಗಲೇ ಲಿಂಗಾಯತ, ಒಕ್ಕಲಿಗ ಸಮುದಾಯದವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.