*ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ*
ಬೆಂಗಳೂರು : ಕೊನೆಗೂ ಕೇಸರಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆ ಬಾಗಿದ್ದು ಅವರ ಪುತ್ರ ಶಿಕಾರಿಪುರ ಶಾಸಕ ಬಿ.ವೈ ರಾಘವೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದೆ.
ಕಳೆದ ವಿಧಾನಸಭೆಯ ಹೀನಾಯ ಸೋಲಿನ ನಂತರ ವಿಧಾನ ಸಭೆ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡದೇ ಅಲ್ಲದೇ ರಾಜ್ಯಾಧ್ಯಕ್ಷರ ಹುದ್ದೆಯ ಕುರಿತ ಚರ್ಚೆಗೆ ಇಂದು ಪೂರ್ಣವಿರಾಮ ಹಾಕಿದ್ದು ಹಾಲಿ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದು, ಮತ್ತೆ ಯಡಿಯೂರಪ್ಪ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪ್ರಾಭಲ್ಯ ಸಾಧಿಸಿದಂತಾಗಿದೆ.
ಬಿ.ಎಲ್.ಸಂತೋಷ ಬಣದ ಶೋಭಾ ಕರಂದ್ಲಾಜೆ, ಸಿ.ಟಿ.ರವಿಮುಂತಾದವರ ಹೆಸರು ರಾಜ್ಯಾಧ್ಯಕ್ಷರ ಹುದ್ದೆಗೆ ಮುನ್ನೆಲೆಗೆ ಬಂದಿತ್ತಾದರೂ ಯಡಿಯೂರಪ್ಪ ಇಲ್ಲದೇ ಲೋಕಸಮರ ಗೆಲ್ಲಲಾಗದು ಎಂಬ ತೀರ್ಮಾನಕ್ಕೆ ಬಂದಿದ್ದು ಇದು ಪಕ್ಷದ ಅನೇಕ ಧುರೀಣರಿಗೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ.
ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡುವುದರೊಂದಿಗೆ ವಿಪಕ್ಷ ನಾಯಕನ ಸ್ಥಾನ ಒಕ್ಕಲಿಗರಿಗೆ ಖಚಿತ ಎನ್ನಲಾಗಿದ್ದು ಯಾರು ಎನ್ನುವುದು ಕುತೂಹಲ ಕೆರಳಿಸಿದೆ. ವಿಜಯೇಂದ್ರ ಆಯ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,ಬಸನಗೌಡ ಪಾಟೀಲರ ವಿಪಕ್ಷ ನಾಯಕನ ಕನಸಿಗೆ ತಣ್ಣಿರೆರಚಿದ್ದು ದೀಪಾವಳಿ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಹಬ್ಬದ ವಾತಾವರಣ ಸೃಷ್ಟಿಸಿದೆ.