*ಶಿಕ್ಷಣ ಆಯುಕ್ತರಾಗಿ ಉಳ್ಳಾಗಡ್ಡಿ / ದಿ.19ರ ಡೊಂಬರ, ದೇವರಾಜ್ ನೇಮಕ ಆದೇಶ ರದ್ದು*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಮಂಜುನಾಥ ಡೊಂಬರ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ದೇವರಾಜ್ ಆರ್. ಅವರ ನೇಮಕದ ದಿ.19ರ ಆದೇಶವನ್ನು ಸರಕಾರ ರದ್ದು ಪಡಿಸಿದೆ.
ನಿನ್ನೆ ರುದ್ರೇಶ ಘಾಳಿಯವರ ಸ್ಥಾನಕ್ಕೆ ಡೊಂಬರ ಅವರನ್ನು ಹಾಗೂ ಸಂತೋಷ್ ಬಿರಾದಾರ ಜಾಗೆಗೆ ದೇವರಾಜ್ ಆರ್ ಅವರ ನೇಮಕ ಮಾಡಿತ್ತು.
ಮಹಾನಗರ ಪಾಲಿಕೆ ಆಯುಕ್ತರಾಗಿ ಪುನಃ ರುದ್ರೇಶ ಘಾಳಿ ನೇಮಕಗೊಳ್ಳಲಿದ್ದು ಶಿಕ್ಷಣ ಇಲಾಖೆ ಆಯುಕ್ತರಾಗಿ ಮಾಜಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ನೇಮಕ ಮಾಡಲಾಗಿದೆ. ಈ ಆದೇಶ ಸಂಜೆಯೊಳಗೆ ಹೊರಬೀಳಲಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.