*ಇಪ್ಪತ್ತೇಳು ಭಕ್ತಿ ಪ್ರಧಾನ ಸಿನಿಮಾಗಳಿಗೆ ಆಕ್ಷನ್ ಕಟ್*
ಬೆಂಗಳೂರು : ಬಾಲ್ಯದಿಂದಲೇ ಹರಿ ಕಥೆಗಳನ್ನು ಕೇಳುತ್ತಾ ಬೆಳೆದು,ಮುಂದೆ ಭಕ್ತಿ ಪ್ರಧಾನ ಕಥೆಗಳನ್ನ ಜನರಿಗೆ ತಿಳಿಸಬೇಕು ಎಂಬ ಹಂಬಲದಿಂದ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡುವಂತ ಆಸಕ್ತಿಯನ್ನು ಬೆಳೆಸಿಕೊಂಡವರು ಕನ್ನಡದ ಖ್ಯಾತ ನಿರ್ದೇಶಕ ಪುರುಷೋತ್ತಮ್ ಓಂಕಾರ (ಬಿ.ಎ.ಓಂಕಾರಸ್ವಾಮಿ) ಅವರು.
ಓದಿದ್ದು ಬಿ ಎಸ್ಸಿ ಆದರೂ ಇದುವರೆಗೆ ಒಟ್ಟು 27 ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.ಭಕ್ತಿ ಪ್ರಧಾನ ಸಿನಿಮಾ ಮಾಡುವುದರಲ್ಲಿ ಸಿದ್ದ ಹಸ್ತರಾದ ಇವರು ಭಾರತೀಯ ಚಿತ್ರರಂಗದಲ್ಲಿಯೇ ಅತಿಹೆಚ್ಚು ಭಕ್ತಿ ಪ್ರಧಾನ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಹೇಳಿರುವ ಸಾಧನೆ ಮುಡಿಗೇರಿಸಿಕೊಂಡಿದ್ದಾರೆ.
ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ, ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ, ಮಹಾಶರಣ ಹರಳಯ್ಯ, ದೇವಿ ಭಾಗಮ್ಮ, ಪ್ರೇಮ ಕವಿತೆ, ಮಹಾಶರಣ ಕರಿಬಸವ, ಪವಾಡ ಪುರುಷ ಸಿದ್ದಪ್ಪಾಜಿ, ಶ್ರೀ ಶಕ್ತಿಮಾತೆ, ಮಹಾ ಶಕ್ತಿ ಮಾತೆಯರು, ಭಕ್ತ ಶಂಕರ, ಪಗಡೆ, ಮತ್ತೆ ಬಂದ ವೀರಪ್ಪನ್, ನಮ್ಮವರು,ಶ್ರೀ ಹಾಸನಾಂಭ ಮಹಿಮೆ, ಚೆಲ್ಲಾಟಗಾರ ಮಾದಪ್ಪ, ಶ್ರೀ ವೀರಭದ್ರೇಶ್ವರ ಮಹಿಮೆ, ಚಳಗುರ್ಕಿ ಶ್ರೀ ಯಾರ್ರೀ ತಾತ, ಪವಾಡ ಪುರುಷ ಅಲ್ಲಿಪುರ ಮಹದೇವ ತಾತ, ಅರಳಿದ ಹೂಗಳು,ಮಹಾದಾಸೋಹಿ ಸಕ್ಕರೆ ಕರಡಿಶ,ಶ್ರೀ ಸಿದ್ಧಾರೂಢ ಚಿತ್ರಗಳನ್ನು ನಿರ್ದೇಶಶಿದ್ದಾರೆ. ಹಾಗೂ ಸಹ ನಿರ್ದೇಶಕರಾಗಿ ಐದು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.
ಟಿವಿ ಧಾರವಾಹಿಗಳ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದು ಈ ಟಿವಿ ದೂರದರ್ಶನ ಉದಯ ಟಿವಿ ಸುಪ್ರಭಾತ ಚಾನಲ್ಗಳಲ್ಲಿ ಪ್ರಸಾರವಾದ ಧಾರಾವಾಹಿಗಳಿಗೆ ಸಂಚಿಕೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ .ಶ್ರೀ ಮಲೆ ಮಹದೇಶ್ವರ, ಘತ್ತರಿಗೆ ಶ್ರೀ ಭಾಗ್ಯವಂತಿ ,ಉಕ್ಕಡಗಾತ್ರಿ ಕರಿಬಸವೇಶ್ವರ,
ಶ್ರೀ ಕಾಲಭೈರವೇಶ್ವರ ಮಹಾತ್ಮೆ, ಪ್ರಳಯ ಬಂತಪ್ಪ ಪ್ರಳಯ, ಅರ್ಜುನ ಜೋಗಿ,ತಲಕಾಡು ಶ್ರೀ ಪಂಚಲಿಂಗೇಶ್ವರ, ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಚರಿತ್ರೆ, ನಂಜನಗೂಡು ನಂಜುಂಡೇಶ್ವರ ಮಹಾ ಯೋಗಿ ಅಡವಿ ಸ್ವಾಮಿ ಮರಾಠಿ ಹೆಂಡ್ತಿ, ಫ್ಯಾಶನ್ ಟೈಲರ್,ಕಿಸೆಂದ್ರ ಮಸೇಂದ್ರ, ನಾನು ಹೀರೋ ನೀನು ಜೀರೋ,ರಾಮ ಶಾಮ, ಮಾವನದು ಮೂರಾಣೆ ಅಳಿಯನದು ಆರಾಣೆ ಮುಂತಾದ 18 ಟೆಲಿ ಫಿಲಂ ಗಳನ್ನು ನಿರ್ದೇಶನವನ್ನು ಇವರು ಮಾಡಿದ್ದಾರೆ.ಧೀರೇಂದ್ರ ಗೋಪಾಲ್ ಅವರ ನೂರಕ್ಕೂ ಹೆಚ್ಚು ಟೆಲಿ ನಾಟಕಗಳಿಗೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಹೆಗ್ಗಳಿಕೆಯನ್ನು ಸಹ ಹೊಂದಿದ್ದು , ಸಾವಿರಾರು ಧ್ವನಿ ಸುರುಳಿಗಳಿಗೆ ಗೀತೆಗಳನ್ನು ರಚಿಸಿದ್ದಾರೆ.
*ತೃಪ್ತಿಕರ ಕಾರ್ಯ:* ಭಕ್ತಿ ಪ್ರಧಾನ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ನನಗೆ ಈ ಕಾರ್ಯಕ್ರಮ ತೃಪ್ತಿ ತಂದಿದೆ ಯುವ ಜನತೆ ಭಕ್ತಿ ಪ್ರಧಾನ ಚಿತ್ರಗಳತ್ತ ಒಂದಿಷ್ಟು ಒಲವು ತೋರಿಸಬೇಕು ನಮ್ಮ ದೇವರು ನಮ್ಮ ಸಂಪ್ರದಾಯ ಏನೆಂಬುದನ್ನು ತಿಳಿಯಬೇಕಾದರೆ ಸಿನಿಮಾ ಮಾಧ್ಯಮ ಅಗತ್ಯ ಎಂದು ಪುರುಷೋತ್ತಮ ಓಂಕಾರ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.