ಹುಬ್ಬಳ್ಳಿ : ನೂರಾ ಹದಿನೆಂಟು ವರ್ಷಗಳ ಇತಿಹಾಸವಿರುವ ಅಮೀನಗಡದ ಸುಪ್ರಸಿದ್ಧ “ವಿಜಯಾ ಕರದಂಟು” ರಾಜ್ಯಾದ್ಯಂತ ಮತ್ತು ಪಕ್ಕದ ಗೋವಾ ರಾಜ್ಯದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದ್ದು ಇದರ ಇಪ್ಪತ್ತೇಳನೇ ಮಳಿಗೆ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ನಾಳೆ ಉದ್ಘಾಟನೆಗೊಳ್ಳಲಿದೆ.
ಅಮೀನಗಡದಲ್ಲಿ1907 ರಲ್ಲಿ ದಿ ಸಾವಳಿಗೆಪ್ಪ ರಾಚಪ್ಪ ಐಹೋಳ್ಳಿ ಯವರು ಪ್ರಪ್ರಥಮ ಬಾರಿಗೆ ತಯಾರಿಸಿ ಇದನ್ನು ಜಗತ್ತಿಗೆ ಪರಿಚಯಿಸಿದರು.ನಂತರ ಅವರ ಮಗನಾದ ಬಸವರಾಜ ಸಾವಳಿಗೆಪ್ಪ ಐಹೋಳ್ಳಿ ಯವರು ಕರದಂಟಿನೊಂದಿಗೆ ಬೇರೆ ಬೇರೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿದರು.ಪ್ರಸ್ತುತ ಮೂರನೇ ತಲೆಮಾರಿನ ಸಂತೋಷ್ ಐಹೊಳ್ಳಿಯವರು ವಿಜಯಾ ಕರದಂಟಿನ ಮಾರುಕಟ್ಟೆ ವಿಸ್ತರಣೆ ಮಾಡಿದ್ದಾರೆ.
ಬೆಂಗಳೂರು, ಮಂಗಳೂರು, ರಾಯಚೂರು, ಗಂಗಾವತಿ, ಸಿಂಧನೂರು, ಇಳಕಲ್, ಗುಳೇದಗುಡ್ಡ, ಹುನಗುಂದ, ಐಹೋಳ್ಳಿ, ಕಾರಟಗಿ, ಮಾಸ್ತಿ, ಲಿಂಗಸೂರು, ಅಮೀನಗಡ, ಬನಹಟ್ಟಿ, ಬಾಗಲಕೋಟೆ, ವಿಜಯಪುರ, ಹೀಗೆ 26 ಶಾಖೆಗಳು ಇದ್ದು 27ನೇ ಶಾಖೆ ಹುಬ್ಬಳ್ಳಿಯ ದಾಜೀಬಾನ್ ಪೇಟೆ ಮೂರುಸಾವಿರ ಮಠ ರಸ್ತೆಯಲ್ಲಿ ಪ್ರಾರಂಭವಾಗುತ್ತಿದೆ.
ವಿಜಯ ಕರದಂಟುಗಳಲ್ಲಿ ಒಟ್ಟು 5 ಪ್ರಕಾರಗಳಿದ್ದು ಒಟ್ಟು 20 ಕ್ಕೂ ಹೆಚ್ಚು ಬಗೆಬಗೆಯ ಸಿಹಿ ತಿಂಡಿಗಳು, ಖಾರಾ ಪದಾರ್ಥ ಲಭ್ಯವಿರುತ್ತದೆ. ಪ್ರಾರಂಭೋತ್ಸವದ ಅಂಗವಾಗಿ ಗ್ರಾಹಕರಿಗೆ ದಿನಾಂಕ 6, 7 ಮತ್ತು 8ರಂದು ಪ್ರತಿ ರೂ 500/- ಖರೀದಿಯ ಮೇಲೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ನೀಡಲಾಗುತ್ತಿದೆಯೆಂದು ಸಂತೋಷ ಐಹೊಳಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಳಿಗೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಮುಂಜಾನೆ 11 ಘಂಟೆಗೆ ಉದ್ಘಾಟಿಸಲಿದ್ದಾರೆ. ಶಾಂತಲಿಂಗ ಮಹಾಸ್ವಾಮೀಜಿ ದೊರೆಸ್ವಾಮಿ ವಿರಕ್ತಮಠ ಬೈರನಟ್ಟಿ ಸಾನಿಧ್ಯವನ್ನು ವಹಿಸಲಿದ್ದು ಗಂಗಾವತಿ ಸಿಲ್ಕ ಸಾರೀಸ ಮಾಲೀಕರಾದ ಸುಲೋಚನಾ ಬಸವರಾಜ್ ಕಮತಗಿ ಉಪಸ್ಥಿತಲಿರಲಿದ್ದಾರೆ.ಗೋಷ್ಠಿಯಲ್ಲಿ ಶ್ರೀ ಮತಿ ಲಕ್ಷ್ಮೀ ಐಹೊಳ್ಳಿ, ಸುನಿಲ್ ನಾಗಠಾಣ, ಆಶಾ ನಾಗಠಾಣ, ಬಸವರಾಜ್ ಗಂಗಾವತಿ, ಅಭಯ ಗಂಗಾವತಿ, ಕುಮಾರ ಅಮೀನಗಡ ಉಪಸ್ಥಿತರಿದ್ದರು.