ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ
ಪೊಲೀಸ್ ಕಮಿಷನರೇಟ್ ವತಿಯಿಂದ ಇಂದು ಕಾರವಾರ ರಸ್ತೆಯ ಹಳೇ ಸಿಆರ್ ಗೌಂಡ್ದಲ್ಲಿ ರೌಡಿ ಪರೇಡ್ ನಡೆಸಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಎಲ್ಲರ ಕಿವಿ ಹಿಂಡಿ ಖಡಕ್ ಎಚ್ಚರಿಕೆ ನೀಡಿದರು.
ಅವಳಿ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸುಮಾರು 890 ರೌಡಿ ಶೀಟರಗಳು ಪಾಲ್ಗೊಂಡಿದ್ದರು. ನೀವೆಲ್ಲ ಮಾಡೋದು ಕಚಡಾ ಕೆಲಸ. ಕೊಲೆ- ಸುಲಿಗೆ, ಆಚಾರಕ್ಕೆ ಕೈಯಲ್ಲಿ ದೇವರ ಟ್ಯಾಟೋ ಹಾಕಿಸೋದು, ಕೊರಳಲ್ಲಿ ದೇವರ ಪೆಂಡೆಂಟ್ ಹಾಕ್ಕೊಂಡು ಸಾಚಾ ತರಾ ನಾಟಕ ಮಾಡ್ತೀರಾ ? ಎಂದು ಅನೇಕರ ಚಳಿ ಬಿಡಿಸಿ, ಕೆಲವರ ಕೊರಳಿನಲ್ಲಿನ ಪೆಂಡೆಂಟ ತೆಗೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕುಮಾರ್ ಶಾಂತಿ ಸುವ್ಯವಸ್ಥೆಯನ್ನು ಯಾರು ಹಾಳು ಮಾಡುತ್ತಿದ್ದಾರೆ.ಕೊಲೆ ಮಾಡಿದ ಆರೋಪಿಗಳು ಬೇಲ್ ಮೇಲೆ ಹೊರಬಂದು ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾರೆ. ಅಂತಹ ಕೆಲವು ಪುಡಿರೌಡಿಗಳನ್ನು ಗಡಿಪಾರು ಮಾಡಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಒಟ್ಟಿನಲ್ಲಿ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಾಕಷ್ಟು ಪ್ರಮಾಣದಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೆಲ ಪುಡಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ಅಂತವರ ಚಟುವಟಿಕೆ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.
ಡಿಸಿಪಿ ಗಳಾದ ಮಹಾಲಿಂಗ ನಂದಗಾಂವಿ, ಸಿ.ಆರ್.ರವೀಶ, ಎಸಿಪಿಗಳು ಈ ವೇಳೆ ಇದ್ದರು.