*5555ಕೆಜಿ ನಾಣ್ಯಗಳ ಮೌಲ್ಯ 73.40ಲಕ್ಷ ರೂ*/ *ಹರಿದು ಬರಲಿದೆ ಭಕ್ತ ಸಾಗರ / ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನ ಭೂತೆ .. ಕಾರ್ಯಕ್ರಮ*
ಹುಬ್ಬಳ್ಳಿ: ’ದ್ವೇಷ ಬಿಡು – ಪ್ರೀತಿ ಮಾಡು’ ಎಂಬುದು ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನ ಮಹಾಪೀಠದ ಮೂಲ ಆಶಯ. ಆ ಆಶಯಕ್ಕೆ ಸಣ್ಣ ಕುಂದು ಬರದಂತೆ ಸಾಗಿಬಂದ ಪರಂಪರೆಯ 13ನೇ ಪೀಠಾಧಿಪತಿ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವದ ನಿಮಿತ್ತ ಫೆ. 1ರಂದು ಹುಬ್ಬಳ್ಳಿ ನೆಹರು ಮೈದಾನದಲ್ಲಿ ಆನೆ ಅಂಬಾರಿ ಮೆರವಣಿಗೆ,5555ಕೆಜಿ ನಾಣ್ಯಗಳಿಂದ ಆನೆ ಅಂಬಾರಿ ಸಹಿತ ಶ್ರೀಗಳ ತುಲಾಭಾರ ನಡೆಯಲಿದ್ದು ಅಂತಿಮ ಹಂತದ ಸಿದ್ಧತೆಗಳು ನಗರದ ನೆಹರು ಮೈದಾನದಲ್ಲಿ ನಡೆದಿವೆ.
10ರೂ. ಮುಖಬೆಲೆಯ73.40 ಲಕ್ಷ ರೂ. ಮೌಲ್ಯದ ನಾಣ್ಯಗಳಿಂದ ತುಲಾಭಾರ ನಡೆಸಲಿದ್ದು,ತುಲಾಭಾರಕ್ಕೆ ಬೃಹತ್ ತಕ್ಕಡಿ ರೂಪಿಸಲಾಗಿದ್ದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಮೂರುಸಾವಿರಮಠದ ಶಾಲಾ ಮೈದಾನಲದಲಿ ಸುಮಾರು 1ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.ಗಂಗಾವತಿ ಸಿಲ್ಕ ಪ್ಯಾಲೇಸ್ ಮಾಲಿಕರು,ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ,ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ,ಅಲ್ಲದೇ ಮಹ್ಮದರಫೀಕ ಸಾವಂತನವರ ಜಂಟಿಯಾಗಿ ಪ್ರಸಾದ ಸೇವೆ ಜವಾಬ್ದಾರಿ ಹೊತ್ತಿದ್ದಾರೆ.
ಮೂರುಸಾವಿರಮಠದಿಂದ ಮಧ್ಯಾಹ್ನ 3ಗಂಟೆಗೆ ಫಕೀರೇಶ್ವರರ ಬೆಳ್ಳಿ ಮೂರ್ತಿಯ ಅಂಬಾರಿ ಉತ್ಸವ ಹಾಗೂ ಶ್ರೀ ಫಕೀರ ಸಿದ್ಧರಾಮರ ಪಲ್ಲಕ್ಕಿ ಮಹೋತ್ಸವಕ್ಕೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮೇಯರ್ ವೀಣಾ ಬರದ್ವಾಡ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಅಂಬಾರಿ ಉತ್ಸವದಲ್ಲಿ ರಾಜ್ಯದ ವಿವಿಧ ಮಠಗಳ 5 ಆನೆಗಳು, 5 ಕುದುರೆಗಳು, 2 ಒಂಟೆಗಳು ಹಾಗೂ ಪ್ರಸಿದ್ಧ ಕಲಾ ತಂಡಗಳು ಇರಲಿವೆ. 60 ವರ್ಷದ ಚಂಪಿಕಾ ಎಂಬ ಆನೆಯು ಅಂಬಾರಿಯನ್ನು ಹೊತ್ತು ಸಾಗಲಿದೆ
ಸಂಜೆ 4-30ಕ್ಕೆ ತುಲಾಭಾರ ಜರುಗಲಿದೆ. ಫಕೀರೇಶ್ವರ ಬೆಳ್ಳಿ ಮೂರ್ತಿ, ಗ್ರಂಥಗಳು ಹಾಗೂ ಆನೆ ಅಂಬಾರಿ ಸಹಿತ ಶ್ರೀ ಫಕೀರ ಸಿದ್ಧರಾಮ ಶ್ರೀಗಳ ತುಲಾಭಾರ ನೆರವೇರಿಸಲಾಗುವುದು.
ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು,65ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದು, ಸಚಿವ ಎಚ್.ಕೆ. ಪಾಟೀಲ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಈಶ್ವರ ಖಂಡ್ರೆ ಪಾಲ್ಗೊಳ್ಳುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ 2013ರಲ್ಲಿ ಮಾಡಿದ ಪ್ರವಚನಗಳ ಸಂಗ್ರಹ ಜೀವನ ದರ್ಶನ ಕನ್ನಡ ಮತ್ತು ಆಂಗ್ಲ ಆವೃತ್ತಿಗಳನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಲೋಕಾರ್ಪಣೆ ಮಾಡಲಿದ್ದಾರೆ.ನಾಳಿನ ಸಮಾರಂಭದಲ್ಲಿ ವಿವಿಧ ಸಾಧಕರ ಸನ್ಮಾನವೂ ನಡೆಯಲಿದೆ.
ಬಂಗಾರದ ತುಲಾಭಾರ: ಶಿರಹಟ್ಟಿಯಲ್ಲಿ 63 ಕೆಜಿ ಬಂಗಾರದಲ್ಲಿ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿಯವರ ತುಲಾಭಾರ ನಡೆಸಲು ಭಕ್ತರು ನಿರ್ಧರಿಸಿದ್ದು,ಇನ್ನೂ ದಿನಾಂಕ ನಿಗದಿಯಾಗಿಲ್ಲ. ಬಂಗಾರದ ಹಣವನ್ನು ಠೇವಣಿ ಇಟ್ಟು ಬಡ ಮಕ್ಕಳ ಶಿಕ್ಷಣಕ್ಕೆ ಬಳಸಬೇಕು ಎಂಬ ಷರತ್ತಿನ ಮೇರೆಗೆ ಶ್ರೀಗಳು ತುಲಾಭಾರಕ್ಕೆ ಒಪ್ಪಿಗೆ ನೀಡಿದ್ದು,ಅಲ್ಲದೇ ಶಿರಹಟ್ಟಿಯಲ್ಲಿ 75 ಗ್ರಂಥಗಳ ಬಿಡುಗಡೆ, 75ಕ್ಕೂ ಅಧಿಕ ಜೋಡಿ ಸಾಮೂಹಿಕ ವಿವಾಹ, 75
ದಿನಗಳ ಪ್ರವಚನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಹಾಪೀಠದ ಉತ್ತರಾಧಿಕಾರಿ ಅಲ್ಲದೇ ನ ಭೂತೆ ಮಾದರಿಯ ಇಂತಹ ಕಾರ್ಯಕ್ರಮವನ್ನು ಸಂಘಟಿಸಿರುವ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳುತ್ತಾರೆ.
ಕಳೆದ 15 ದಿನಗಳಿಂದ ಭಾವೈಕ್ಯತಾ ರಥ ಯಾತ್ರೆ ಇಡೀ ಹುಬ್ಬಳ್ಳಿಯಲ್ಲಿ ಸಂಚರಿಸಿದ್ದು ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವವಾಗಿ ಜಾತಿ,ಮತ ಭೇದವಿಲ್ಲದೇ ಸ್ವಾಗತಿಸಿದ್ದು ಫಕೀರ ದಿಂಗಾಲೇಶ್ವರರ ಆಶೀರ್ವಚನ ಅಕ್ಷರಶಃ ಪುನೀತರನ್ನಾಗಿಸಿದೆ. ಇಂದು ಸಹ ನೆಹರು ಮೈದಾನದಲ್ಲಿನ ಸಿದ್ಧತೆಗಳನ್ನು ದಿಂಗಾಲೇಶ್ವರರು ಪರಿಶೀಲಿಸಿದರು.
ಬೊಮ್ಮನಹಳ್ಳಿಯ ಶ್ರೀ ಶಿವಯೋಗಿ ಸ್ವಾಮೀಜಿ, ಪ್ರಕಾಶ ಬೆಂಡಿಗೇರಿ, ಮಲ್ಲಿಕಾರ್ಜುನ ಸಾವಕಾರ, ಮಲ್ಲಿಕಾರ್ಜುನ ಶಿರಗುಪ್ಪಿ,ಮಹಾಂತೇಶ ಗಿರಿಮಠ, ಹನುಮಂತಪ್ಪ ದೊಡ್ಡಮನಿ, ಚಂದ್ರಶೇಖರ ಗೋಕಾಕ, ಮಲ್ಲಿಕಾರ್ಜುನ ಗುಂಡೂರ, ಶಿವು ಮೆಣಸಿನಕಾಯಿ, ಹನುಮಂತ ಬಂಕಾಪುರ ಸಹಿತ ನೂರಾರು ಭಕ್ತರು ಹಗಲಿರುಳೆನ್ನದೇ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.