ಹುಬ್ಬಳ್ಳಿ : ಅಮರಗೋಳದ ತಳವಾರ ಓಣಿಯ ಅಪ್ರಾಪ್ತ ಯುವತಿಯ ಮೇಲೆ ಬಲತ್ಕಾರದಿಂದ ಸಂಭೋಗ ಮಾಡಿ , ಜೀವ ಬೆದರಿಕೆ ಹಾಕಿದ ಆರೋಪಿಯನ್ನು ನವನಗರ ಪೊಲೀಸರು ದೂರು ದಾಖಲಾದ ಒಂದು ಘಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ರಾಪ್ತೆಯ ತಾಯಿ ಸಣ್ಣಕರಿಯವ್ವ (38) ಎಂಬಾಕೆ ಇಂದು ಸಾಯಂಕಾಲ 7-45ಕ್ಕೆ ದೂರು ದಾಖಲಿಸಿದ್ದು ರಾತ್ರಿ 8-45ರೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಸದ್ದಾಂ ಬಂಧನವನ್ನು ಸ್ವತಃ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಖಚಿತಪಡಿಸಿದ್ದಾರೆ.
ಹಿನ್ನೆಲೆ : ಅಪ್ರಾಪ್ತ ಯುವತಿ (17) ಕಳೆದ ದಿ. 29ರಂದು ಮನೆಯಲ್ಲಿ ವಾಂತಿ ಮಾಡಿಕೊಂಡಾಗ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೂ ವಾಂತಿ ನಿಲ್ಲದಾದಾಗ ಯುಪಿಟಿ ಮಾಡಿಸಿದಾಗ ಆಕೆ ಗರ್ಭಿಣಿ ಎಂಬ ಸತ್ಯ ಹೊರಬಂದಿದೆ. ಈ ಬಗ್ಗೆ ವಿಚಾರಿಸಲಾಗಿ ತಾನು ಹಾಗೂ ಸದ್ದಾಂ ಭಗಿನಿ ನಿವೇದಿತಾ ಶಾಲೆಯಲ್ಲಿ ಓದುವಾಗಲೇ ಸ್ನೇಹಿತರಾಗಿದ್ದು ನಂತರ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ನವನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತೆ ಭೇಟಿಯಾಗಿದ್ದು ಇಬ್ಬರೂ ಪ್ರೀತಿಸುತ್ತಾ ಆಗಾಗ ಭೇಟಿಯಾಗುತ್ತಿದ್ದರು. ಪಿಯುಸಿ ಪರೀಕ್ಷೆ ಮುಕ್ತಾಯವಾದ ನಂತರ ಎಲ್ಲಿಯಾದರೂ ಹೊರಗೆ ಹೋಗೋಣ ಎಂದು ನವನಗರ ಗುಡ್ಡದ ಹನುಮಂತ ದೇವಸ್ಥಾನ ಹಿಂದೆ ಕರೆದುಕೊಂಡು ಹೋಗಿ ನಾನು ಪರಿಶಿಷ್ಠ ಜಾತಿಯವಳು , ಮದುವೆಯಾದ ಮೇಲೆ ನೋಡೋಣ ಎಂದು ಹೇಳಿದರು ಕೇಳದೆ ಒತ್ತಾಯ ಪೂರ್ವಕ ಸಂಭೋಗ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದನು. ಹೀಗಾಗಿ ತಾನು ಈ ವಿಷಯ ಹೇಳಿರಲಿಲ್ಲ ಎಂದು ಮಗಳು ಹೇಳಿದ್ದಾಗಿ ಯುವತಿಯ ತಾಯಿ ದೂರಿನಲ್ಲಿ ಹೇಳಿದ್ದಾಳೆ.ಅಲ್ಲದೇ ಇಂದು ದಿ. 3ರಂದು ಸದ್ದಾಂ ಲಿಂಬೂವಾಲೆ ತಮ್ಮ ಮಗಳಿಗೆ ಜಾತಿ ನಿಂದನೆ ಮಾಡಿ ದೂರು ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.
ಅತ್ಯಂತ ಸೂಕ್ಷ ವಿಷಯವಾದ್ದರಿಂದ ದೂರು ದಾಖಲಾದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.