ಬಂಕಾಪುರದ ಬಿಷ್ಟಪ್ಪಗೆ ಹುಬ್ಬಳ್ಳಿ ಕೆಎಂಸಿಯಲ್ಲಿ ಚಿಕಿತ್ಸೆ ಮುಂದುವರಿಕೆ
ಹುಬ್ಬಳ್ಳಿ : ಮೃತಪಟ್ಟಿದ್ದಾರೆಂದು ಊರಿಗೆ ಕರೆತರುವಾಗ ವ್ಯಕ್ತಿಯೋರ್ವ ಬದುಕಿರುವ ಘಟನೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ನಡೆದಿದೆ.
ಬಿಷ್ಟಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ (45)
ಎಂಬುವವರೇ ಸತ್ತು ಬದುಕಿದ ವ್ಯಕ್ತಿಯಾಗಿದ್ದಾರೆ.
ಬದುಕಿದ ವ್ಯಕ್ತಿಯನ್ನು ಹುಬ್ಬಳ್ಳಿ ಕಿಮ್ಸ್ ಗೆ ಗುಡಿಮನಿ ಕುಟುಂಬಸ್ಥರು ದಾಖಲಿಸಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ
ಮೃತಪಟ್ಟಿದ್ದಾನೆ ಎಂದು ತಿಳಿಸಿದ ಕಾರಣ ಮೃತ ದೇಹ ಬಂಕಾಪುರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಮತ್ತೆ ಉಸಿರಾಟ ಆರಂಭಿಸಿದ್ದಾನೆ.
ಬಿಷ್ಟಪ್ಪ ಬಂಕಾಪುರದ ಮಂಜುನಾಥ ನಗರದ ನಿವಾಸಿಯಾಗಿದ್ದು ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣದಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ ನಂತರ ಅವರ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಆಂಬ್ಯುಲೆನ್ಸ್ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಹೋಗುವಾಗಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದಿದ್ದಳು.
ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರು ಬಿಟ್ಟಿದ್ದಾನೆ.
ಗಾಬರಿಯಾಗಿ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿವೈದ್ಯರು ತಪಾಸಣೆ ಮಾಡಿದಾಗ ವ್ಯಕ್ತಿ ಬದುಕಿರೋದು ದೃಢವಾಗಿಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ವೈದ್ಯರು ಅದೇ ವಾಹನದಲ್ಲಿ ಕರೆತಂದು ಕೆಎಂಸಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಬಿಷ್ಣಪ್ಪ ಗೆ ಚಿಕಿತ್ಸೆ ನೀಡುವ ವೇಳೆ ಅಷ್ಟೊತ್ತಿಗಾಗಲೇ ಬಂಕಾಪುರದಲ್ಲಿ ಬ್ಯಾನರ್ ಗಳನ್ನು ಹಾಕಿದ್ದ ಕುಟುಂಬಸ್ಥರು ಮೃತನ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಸತ್ತ ಸುದ್ದಿ ತಿಳಿಸಿದ್ದರು.
ಹುಬ್ಬಳ್ಳಿಯಲ್ಲಿ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ಮಾತನಾಡಿ,ಬಿಷ್ಣಪ್ಪ ಮತ್ತು ಕುಟುಂಬಸ್ಥರು ನಿನ್ನೆ ಸಂಜೆ 4.20 ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ.ನಮ್ಮ ಆಸ್ಪತ್ರೆಗೆ ಬಂದಾಗ ಬಿಷ್ಣಪ್ಪ ಜೀವಂತವಾಗಿದ್ದ. ಆದ್ರೆ ಆರೋಗ್ಯ ಸ್ಥಿತಿ ಬಹಳಷ್ಟು ಚಿಂತಾಜನಕವಾಗಿತ್ತುಹೀಗಾಗಿ ನಮ್ಮ ಆಸ್ಪತ್ರೆಯ ಮುಖ್ಯ ವೈದ್ಯ ಸುರೇಶ್ ನೇತೃತ್ವ ತಂಡ ಕೂಡಲೇ ಚಿಕಿತ್ಸೆ ನೀಡಿದ್ದಾರೆ.
ಸದ್ಯ ಬಿಷ್ಟಪ್ಪ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ
ಲಿವರ್ ಮತ್ತು ಮೆದುಳಿನ ಸಮಸ್ಯೆ ಯಿಂದ ಬಳಲುತ್ತಿದ್ದಾರೆ
ಅವರಿಗೆ ಚಿಕಿತ್ಸೆ ನೀಡುತ್ತೆದ್ದೇವೆ
ನಾವು ಎಸ್.ಡಿ.ಎಂ.ಸಿ ಹೆಲ್ತ್ ರಿಪೋರ್ಟ್ ಪರಿಶೀಲನೆ ನಡೆಸಿದ್ದೇವೆ.ಅವರು ವೈದ್ಯರ ಸಲಹೆ ವಿರುದ್ಧವಾಗಿ ಕರೆದುಕೊಂಡು ಹೋಗಿದ್ದಾರೆ ಎಂಬುದು ಕಂಡುಬಂದಿದೆ
ಬಿಷ್ಣಪ್ಪ ಬದುಕಿರುವವರಿಗೂ ನಮ್ಮ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ ಎಂದಿದ್ದಾರೆ.
ಬಿಷ್ಟಪ್ಪ ತನ್ನ ಕೈಯಾರೆ ಜೀವನ ಹಾಳು ಮಾಡಿಕೊಂಡಿದ್ದಾನೆ ಎಂದು ಮಗ ಬಿಷ್ಟಪ್ಪನನ್ನು ನೆನೆದು ತಾಯಿ ಗಂಗಮ್ಮ ಕಣ್ಣೀರು ಹಾಕುತ್ತಾರೆ.ಬಂಕಾಪುರದಲ್ಲಿರೋ ಬಿಷ್ಟಪ್ಪನ ತಾಯಿ
ಮಕ್ಕಳಿಂದ ತುಂಬಾ ನೋವು ಅನುಭವಿಸಿದ್ದೇನೆ.ಮಗ ಮದ್ಯ ಸೇವಿಸ್ತಿದ್ದ, ಗುಟ್ಕಾ ಹಾಕ್ತಿದ್ದಮಗ ಎಲ್ಲ ರೀತಿಯ ಚಟ ಮಾಡ್ತಿದ್ದ
ಮಕ್ಕಳು ನಮಗೇನು ಒಳ್ಳೆಯದನ್ನು ಮಾಡಲಿಲ್ಲ
ತಾವಾಗಿಯೇ ಜೀವನ ಹಾಳು ಮಾಡಿಕೊಂಡಿದ್ದಾರೆ.
ಬಿಷ್ಟಪ್ಪನಿಗೆ ಇಬ್ಬರು ಮಕ್ಕಳಿದ್ದಾರೆ
ಅಂಗಡಿ ನಡೆಸಿಕೊಂಡು ಜೀವನ ಮಾಡ್ತಿದ್ದ ಎನ್ನುತ್ತಾರೆ.