*ಏಪ್ರಿಲ್ 1ರಂದು ಸ್ಥಾನಕ್ಕೆ ಗುಡ್ ಬೈ ಹೇಳುವೆ*
ಹುಬ್ಬಳ್ಳಿ : ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ಏಪ್ರಿಲ್ 1ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಹುಬ್ಬಳ್ಳಿಯ ನಿವಾಸದಲ್ಲಿ ತಮ್ಮ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸದನದ ಬೆಳವಣಿಗೆಗಳು ಘಾಸಿ ಉಂಟು ಮಾಡಿದೆ ಎಂದು ಕಳೆದ ಮೂರು ವರ್ಷಗಳಿಂದ ಸಭಾಪತಿ ಆಗಿರುವ ಪರಿಷತ್ತಿನ ಅತ್ಯಂತ ಹಿರಿಯ ಸದಸ್ಯರಾದ ಅವರು ಹೇಳಿದರು.
ಈ ಸಂಬಂಧ ಕರ್ನಾಟಕ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳೆದ ದಿ.21ರಂದೇ ದಿನಾಂಕ 01-04-2025ರಂದು ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ವೈಯಕ್ತಿಕ ಕಾರಣಗಳಿಂದ ಸದರಿ ರಾಜೀನಾಮೆಯನ್ನು ದಿನಾಂಕ 31-03-2025ರೊಳಗೆ ಸ್ವೀಕರಿಸಿ ಎಂದು ತಿಳಿಸಿದ್ದರು.ಆದರೆ ತಾಂತ್ರಿಕ ಕಾರಣದಿಂದ ಅದು ಅಂಗೀಕಾರವಾಗದ ಕಾರಣ ದಿ.31ರವರೆಗೆ ಮುಂದುವರಿದು ಏ.1ರಂದು ರಾಜಿನಾಮೆ ನೀಡುವೆ ಎಂದರಲ್ಲದೆ, ಪರಿಷತ್ತಿನ ಸದಸ್ಯರ ವರ್ತನೆ, ಬಳಸುವ ಭಾಷೆ ಇಂದು ಎಲ್ಲೆ ಮೀರುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಇಷ್ಟರಲ್ಲಿ ಕಾಂಗ್ರೆಸ್ ನಾಮಕರಣ ನಿಶ್ಚಿತವಾಗಿದೆ. ಆ ಪಕ್ಷದ ಸದಸ್ಯರ ಬಲವೂ ಹೆಚ್ಚಾಗಿ ಸಭಾಪತಿ ಸ್ಥಾನ ಕೈ ಪಾಳೆಯದ ಪಾಲಾಗುವ ಸಾಧ್ಯತೆಗಳಿವೆ.ಮೂರು ಬಾರಿ ಸ್ಪೀಕರ್ ಆಗಿರುವ ಹೊರಟ್ಟಿ ಅವಧಿ 2028ರವರೆಗೆ ಇದೆ.