*ಸಮಗ್ರ ದಾಖಲೆ ಒಂದು ವಾರದಲ್ಲಿ ನೀಡಲು ಸೂಚನೆ*
ಹುಬ್ಬಳ್ಳಿ: ಕೇಂದ್ರ ಸರಕಾರದ ನೆರವಿನಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟಸಿಟಿ ಯೋಜನೆಯಡಿ ಡಿಜಿಟಲೀಕರಣ ಮಹತ್ವಾಕಾಂಕ್ಷಿ ಸ್ಮಾರ್ಟ ಹೆಲ್ತಕೇರ್ ನಲ್ಲಿ ನಡೆದ ಅವ್ಯವಹಾರದ ಕುರಿತು ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಎರಡನೆ ಮಹತ್ವದ ಸಭೆ ಇಂದು ಜರುಗಿತು.
ಮಾಜಿಮಹಾಪೌರ ವೀರಣ್ಣ ಸವಡಿ ಅಧ್ಯಕ್ಷತೆಯಲ್ಲಿ ಮಾಜಿಮಹಾಪೌರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ, ಅಭಿಯಂತರರಾದ ವಿಜಯಕುಮಾರ, ಆರೋಗ್ಯ ಅಧಿಕಾರಿಗಳಾದ ಆರ್ ಸಿ ದಂಡೆಪ್ಪನವರ, ಸ್ಮಾರ್ಟಸಿಟಿ ಅಧಿಕಾರಿ ಬಸವರಾಜ ಉಪಸ್ಥಿತರಿದ್ದರು.
ಸಭೆಯಲ್ಲಿ 3.26ಕೋಟಿ ವೆಚ್ಚದಲ್ಲಿ ಜರುಗಿದ ಕಾಮಗಾರಿಗಳು ಸಮರ್ಪಕವಾಗಿರದೆ ಇರುವುದು ಕಂಡುಬಂದಿದ್ದು, ಹಾಗೂ ಪಾಲಿಕೆ ಅಧಿಕಾರಿಗಳು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಯಾವುದೇ ಸಮನ್ವಯ ಇರದ್ದು ಕಂಡುಬಂದಿರುತ್ತದೆ.
ಹಿಂದಿನ ಸಭೆಯಲ್ಲಿ ಟೆಂಡರ ಹಾಗೂ ಇನ್ನಿತರ ಸಮಗ್ರ ಮಾಹಿತಿಯನ್ನು ಸಮಿತಿಗೆ ನೀಡಲು ಸೂಚಿಸಲಾಗಿತ್ತು.
ಆದರೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಮಾಹಿತಿ ನೀಡದೆ ಇರುವದು ಕಂಡುಬಂದಿದ್ದು, ಪಾಲಿಕೆ ಅಧಿಕಾರಿಗಳಿಗೆ ಸಮಿತಿಯು ಒಂದು ವಾರದ ಗಡುವು ನೀಡಿ ದಾಖಲೆಗಳನ್ನು ಸಮಿತಿ ಹಾಗೂ ಅಧ್ಯಕ್ಷರಿಗೆ ನೀಡಬೇಕೆಂದು ಸೂಚಿಸಲಾಯಿತು.
ಮಹತ್ತರ ದಾಖಲೆಗಳಾದ ಕಾಂಪಿಟೇಟರ ಬಿಡ್ಡಿಂಗ ಸರಕಾರದ ಮಾರ್ಗಸೂಚಿ, ತಾಂತ್ರಿಕ ಪರಿಣಿತರ ಸೇವೆ , ಮಾಹಿತಿ ವಿವಿಧ ಏಜನ್ಸಿಗಳ ಕಾರ್ಯಪದ್ದತಿ , ವಿವಿಧ ವೈದ್ಯರ ಸೇವೆ ಪಡೇದ ಮಾಹಿತಿ ಬಳಸಲಾದ ತಂತ್ರಜ್ಞಾನ ವಿಭಾಗದಲ್ಲಿ ಹಾಗು ವಿವಿಧ ತಾಂತ್ರಿಕ ತರಬೇತಿಗಳ ಮಾಹಿತಿಯನ್ನು ಅಚ್ಚುಕಟ್ಟಾಗಿ ನೀಡಲು ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನವಸಂಪನ್ಮೂಲ ವಿಭಾಗದಲ್ಲಿ ಪಾಲಿಕೆ ಸಿಬ್ಬಂದಿ ಬಳಕೆ ಮಾಡಿ ಐದು ವರ್ಷಗಳಿಂದ ಗುತ್ತಿಗೆ ಕಾರ್ಮಿಕರ ಹೊರತುಪಡಿಸಿ ಪಾಲಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಸಭೆಯ ಗಮನಕ್ಕೆ ತಂದು ಕೂಡಲೇ ಕ್ರಮಕ್ಕೆ ಆಗ್ರಹಿಸಿದರು.