*ಮೃಣಾಲ್ ಶುಗರ್ಸ್ ಸ್ಥಾಪನೆಗೆ ಯಾದವಾಡ ಗ್ರಾಮಸ್ಥರ ವಿರೋಧ, ಪ್ರತಿಭಟನೆ*
ಧಾರವಾಡ: ಕ್ಷೇತ್ರ ಪುನರ್ ವಿಂಗಡಣೆ ವಿಚಾರ ಮುನ್ನೆಲೆಗೆ ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳು ಅಸ್ಥಿತ್ವಕ್ಕೆ ಬರುವ ವಿಚಾರ ದಟ್ಟವಾದಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಕಣ್ಣು ಇಟ್ಟಿದ್ದಾರೆಂಬ ಗುಸು ಗುಸು ಕೇಳಿ ಬಂದಿತ್ತು.
ಹೀಗಿರುವಾಗಲೇ ಮೃಣಾಲ್ ಹೆಬ್ಬಾಳಕರ್ ಒಡೆತನದ ಸಕ್ಕರೆ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ನಡೆಸಿರುವುದು ಗೊತ್ತಾಗಿದೆ.
ಧಾರವಾಡ ತಾಲೂಕಿನ ಪುಡಕಲಕಟ್ಟಿ- ಯಾದವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ಮೃಣಾಲ್ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾದವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಸರಕಾರಕ್ಕೆ ಮನವಿ ಇಂದು ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಯದ ಈ ಪ್ರದೇಶದಲ್ಲಿ ಶುಗರ್ ಫ್ಯಾಕ್ಟರಿ ಏಕೆ ಎಂದು ಪ್ರಶ್ನಿಸಿರುವ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ,ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಠರಾವ್ ಪಾಸ್ಮಾಡಿ ಎನ್ಓಸಿ ಕೊಡಲು ನಿರಾಕರಿಸಿ, ಇದೀಗ ಹೋರಾಟಕ್ಕಿಳಿದಿದ್ದಾರೆ.
ಧಾರವಾಡ ತಾಲೂಕಿನಲ್ಲಿ ನೀರಾವರಿ ಸೌಲಭ್ಯವೇ ಇಲ್ಲ. ಮಳೆಯಾಶ್ರಿತ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಬಹು ಬೆಳೆಗಳ ಜತೆಗೆ ತರಕಾರಿ ಬೆಳೆದು ರೈತರು ಬದುಕುತ್ತಿದ್ದಾರೆ.
ಸಮೀಪದ ಧಾರವಾಡ ನಗರಕ್ಕೆ ಬರುವ ಬಹುತೇಕ ತರಕಾರಿ ಮೃಣಾಲ ಶುಗಸ್ ೯ ವ್ಯಾಪ್ತಿಯಿಂದಲೇ ಬರುತ್ತಿದೆ.
ಆದರೆ ಅಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ಬಹುಬೆಳೆ ಪದ್ಧತಿ ನಾಶವಾಗಿ ಕೃಷಿಗೆ ದೊಡ್ಡ ಪೆಟ್ಟು ಬೀಳಲಿದೆ. ಜೊತೆಗೆ ಸಕ್ಕರೆ ಫ್ಯಾಕ್ಟರಿಯಿಂದ ಕಪ್ಪು ಬೂದಿ ಹಾರಿ ಬೆಳೆಗಳು ಹಾಗೂ ಮಣ್ಣಿನ ಮೇಲೆ ಬಿದ್ದು ಬೆಳೆ ಹಾಗೂ ಮಣ್ಣಿನ ಫಲವತ್ತತೆ ನಾಶವಾಗಲಿದೆ. ಕೆಮಿಕಲ್ ದುರ್ನಾತ ಬೀರಲಿದೆ. ಹಾಗೂ ವಾಯು ಮಾಲಿನ್ಯ ಉಂಟಾಗಿ ಜನರ ಆರೋಗ್ಯಕ್ಕೂ ಹಾನಿ ಆಗಲಿದೆ. ಅಂತರ್ಜಲಮಟ್ಟ ಕುಸಿದು ಜಲಮೂಲ ವಿಷಕಾರಿ ಆಗಲಿದೆ. ಬೆಳಗಾವಿ ಜಿಲ್ಲೆ ಮಲ್ಲಮ್ಮನ ಬೆಳವಡಿ ಬಳಿಯ ಹರ್ಷ ಶುಗಸ್ ೯ ನಿಂದಲೂ ಸುತ್ತಲಿನ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಪಂ ಅಧ್ಯಕ್ಷರಾದ ಅಧ್ಯಕ್ಷೆ ಲಕ್ಷ್ಮಿ ಗಳಗಿ,
ಗ್ರಾಮದ ಹಿರಿಯರಾದ ಮಡಿವಾಳಪ್ಪ ದಿಂಡಲಕೊಪ್ಪ, ಮಂಜುನಾಥ ಬಂಡೆಪ್ಪನವರ, ಬಸವರಾಜ ಬೆಂಡಿಗೇರಿ,
ದಾವಲ ಮುಲ್ಲಾನವರ, ಪಾರ್ವತಿ ಹಿರೇಮಠ, ಮೃತ್ಯುಂಜಯ ಹಿರೇಮಠ ಮುಂತಾದವರಿದ್ದರು.
ಮುಂಬರುವ ಹೊಸ ವಿಧಾನಸಭಾ ಕ್ಷೇತ್ರ ಲಕ್ಷ್ಯದಲ್ಲಿಟ್ಟು ಈ ಯತ್ನ ನಡೆದಿದೆ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ದೊರೆತಿದೆ. ಮೃಣಾಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಕಣಕ್ಕೆ ಇಳಿದು ಪರಾಭವ ಗೊಂಡಿದ್ದರು.