*ಸುನಿಧಿ ಕಲಾ ಸೌರಭದಿಂದ ಪ್ರಶಸ್ತಿ ಪ್ರದಾನ*
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ರಂಗಭೂಮಿ ಕಲೆಯನ್ನು ನಿರಂತರವಾಗಿ ಉಳಿಸುವ ಪ್ರಕ್ರಿಯೆಯಲ್ಲಿ ಹಲವರು ಮಹತ್ವದ ಪಾತ್ರವನ್ನು ವಹಿಸಿದ್ದರೂ ಕಳೆದ 17 ವರ್ಷಗಳಿಂದ ಸದ್ದಿಲ್ಲದೆ ರಂಗ ಚಟುವಟಿಕೆ ಮಾಡುತ್ತಾ ಅನೇಕ ಯುವ ಕಲಾವಿದರಿಗೆ ಅವಕಾಶ ಕಲ್ಪಿಸಿದವರು ರಂಗ ರೇಖಾ ಕಲಾ ಬಳಗದ ಅಧ್ಯಕ್ಷ,ನಟ ,ನಿರ್ದೇಶಕರಾದ ಬಸವರಾಜ ಚಕ್ರಸಾಲಿಯವರು.
ವಿಶ್ವ ರಂಗಭೂಮಿ ದಿನಾಚರಣೆ 2025 ರ ಅಂಗವಾಗಿ ಸುನಿಧಿ ಕಲಾ ಸೌರಭ ಸಂಸ್ಥೆ ಹುಬ್ಬಳ್ಳಿ ರಂಗಭೂಮಿಯ ಅನುಪಮ ಸೇವೆಗೆ ನೀಡುವ ರಂಗ ಸೌರಭ ಪ್ರಶಸ್ತಿ ಈ ಬಾರಿ ಚಕ್ರಸಾಲಿಯವರ ಮುಡಿಗೇರಿದೆ.
ಪೌರಾಣಿಕ ,ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಹತ್ತಕ್ಕಿಂತ ಹೆಚ್ಚು ನಾಟಕಗಳನ್ನ ರಚಿಸಿ ರಂಗದ ಮೇಲೆ ತಂದಿದ್ದಾರೆ.ಬಾಲ್ಯದಿಂದ ರಂಗಭೂಮಿಯತ್ತ ಅಪಾರ ಒಲವನ್ನ ಹೊಂದಿರುವ ಇವರು ಮಕ್ಕಳ ರಂಗಭೂಮಿಯಿಂದ ಆರಂಭವಾದ ಇವರ ಸೇವೆ ಅನೇಕ ರಂಗ ತಂಡಗಳಲ್ಲಿ ಅಭಿನಯಿಸುತ್ತ ,ಶೇಕಸ್ಪಿಯರ್ ಕವಿ, ವರಕವಿ ದ ರಾ ಬೇಂದ್ರೆ,ಡಾ ಕೆ ಎಸ್ ಶರ್ಮಾ, ಎಂ ಡಿ ಗೋಗೇರಿ,ಅವರು ಬರೆದ ನಾಟಕಗಳಿಗೆ ನಿರ್ದೇಶನ ನೀಡಿ ಅಭಿನಯಿಸಿದ್ದಾರೆ, ಶಿಶುನಾಳ ಶರೀಫ, ಅಲ್ಲಮ ಜಗದ ಜಂಗಮ ಸೇರಿದಂತೆ ಅನೇಕ ನಾಟಕಗಳಲ್ಲಿ
ಇವರು ಅಮೋಘ ಅಭಿನಯ ನೀಡಿದ್ದಾರೆ.
ಇಂದು ದಿ. 28ರಂದು ಶುಕ್ರವಾರ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಸುನಿಧಿ ಕಲಾ ಸೌರಭದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತಿದೆ.
ದಿ.30ರಂದು ರಂಗ ರೇಖಾ ಬಳಗದಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಅಲ್ಲಮ
ನಾಟಕ ಪ್ರದರ್ಶನ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಡೆಯಲಿದೆ.