ಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ರುದ್ರೇಶ ಘಾಳಿ ಅವರ ಸ್ಥಾನಕ್ಕೆ ಮಂಜುನಾಥ ಡೊಂಬರ ಅವರನ್ನು ಸರ್ಕಾರ ಇಂದು ನಿಯುಕ್ತಿಗೊಳಿಸಿದೆ
ಕಳೆದ ಐದು ತಿಂಗಳ ಹಿಂದಷ್ಟೇ ಪಾಲಿಕೆ ಆಯುಕ್ತರಾಗಿ ಬಂದಿದ್ದ ಗಾಳಿ ಅವರನ್ನು ಶಿಕ್ಷಣ ಇಲಾಖೆಗೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು,ಅವರಸ್ಥಾನದಲ್ಲಿ ಕೆಎಎಸ್ ಹಿರಿಯ ಶ್ರೇಣಿಯ ಇದುವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ಡೊಂಬರ ನೇಮಕಗೊಂಡಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ್ ಬಿರಾದಾರ ಜಾಗೆಗೆ ಧಾರವಾಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ದೇವರಾಜ್ ಆರ್.ನೇಮಕಗೊಂಡಿದ್ದಾರೆ.
ಪಾಲಿಕೆಗೆ ಹಳೆ ಗಂಡನೆ ಗತಿ ಎಂದು ಡಾ. ಈಶ್ವರ ಉಳ್ಳಾಗಡ್ಡಿ ಬರುವರೆಂಬ ವದಂತಿ ಹುಸಿಯಾಗಿದೆ.