ಸಂಚಿನ ರೂವಾರಿಗಳು ಗ್ರಾಮಾಭಿವೃದ್ಧಿ ಕೆಲಸಗಾರರು
ಹುಬ್ಬಳ್ಳಿ: ಧರ್ಮಸ್ಥಳದ ಹೆಗ್ಗಡೆಯವರ ಮನೆತನ ಸಾವಿರಾರು ವರ್ಷಗಳಿಂದ ಮಂಜುನಾಥ ಸ್ವಾಮಿಯ ಕೃಪೆ ಜನರತ್ತ ಹರಿಸುತ್ತ ಬಂದಿದೆ.1982ರಲ್ಲಿ ರಾಜ್ಯದ ಬಡ ಜನರ ಪುನಶ್ಚೇತನಕ್ಕೆ ಹುಟ್ಟಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 2 ಕೋಟಿಗೂ ಹೆಚ್ಚು ಜನರ ತುತ್ತಿನ ಚೀಲಕ್ಕೆ ಆಧಾರವಾಗಿದ್ದು ಹೀಗಿರುವಾಗಲೇ ಧಾರವಾಡ ಸಮೀಪದ ರಾಯಾಪೂರದಲ್ಲಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ನ ಪ್ರಾದೇಶಿಕ ಕಚೇರಿಯಲ್ಲಿನ ಭದ್ರತಾ ಕೊಠಡಿಯನ್ನು ಒಡೆದು ಸುಮಾರು ಒಂದೂಕಾಲು ಕೋಟಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಖಡಕ್ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಇಂದು
ಸುದ್ದಿಗೋಷ್ಠಿಯಲ್ಲಿ ಬಂಧನದ ವಿವರಗಳನ್ನು ಬಹಿರಂಗಪಡಿಸಿದರು.
ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರ, ನವಲಗುಂದದ ಬಸವರಾಜ ಶೇಖಪ್ಪ ಬಾಬಜಿ, ಜಿಲಾನಿ ಬವರಸಾಬ ಜಮಾದಾರ, ಪರಶುರಾಮ ಹನಮಂತಪ್ಪ ನೀಲಪ್ಪಗೌಡರ, ಮಹಾಂತೇಶ ಲಕ್ಷ್ಮಣ ಹಿರಗಣ್ಣವರ, ರಂಗಪ್ಪ ನಾಗಪ್ಪ ಗುಡಾರದ, ಮಂಜುನಾಥ ಯಮನಪ್ಪ ಬೋವಿ, ಕಿರಣ ಶರಣಪ್ಪ ಕುಂಬಾರ, ರಜಾಕಅಹ್ಮದ ಅಲ್ಲಾವುದ್ದೀನ್ ಮುಲ್ಲಾನವರ ಮತ್ತು ವೀರೇಶ ಸಿದ್ದಪ್ಪ ಚವಡಿ ಸೆರೆ ಸಿಕ್ಕಿರುವ ಆರೋಪಿಗಳಾಗಿದ್ದಾರೆ.
ಕಳ್ಳತನ ಮಾಡಿದ್ದ ನಗದು ಬಾಬ್ತು1,24,48,087 ರೂಪಾಯಿಗಳ ಪೈಕಿ79,89,870 ರೂ. ಜಪ್ತಿ ಮಾಡಲಾಗಿದೆ. ಅಲ್ಲದೇ ಕಳ್ಳತನಕ್ಕೆ ಬಳಸಿದ್ದ 1ಕಾರು, 2 ಬೈಕ್ ಮತ್ತು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಳೆದ ದಿ24 ರಂದು ಪ್ರಾದೇಶಿಕ ಕಛೇರಿಯಲ್ಲಿ ಇಡಲಾಗಿದ್ದ ಸೇಫ್ಟಿ ರೂಮಿನ ಕೀಲಿ ಮುರಿದು ಒಳಪ್ರವೇಶಿಸಿ, ಸೇಪ್ಪಿ ಲಾಕರಗಳನ್ನು ಆಯುಧಗಳಿಂದ ಮೀಟಿ ಅದರಲ್ಲಿದ್ದ ಹಣ ದೋಚಿದ್ದರು. ದೂರಿನ ಅನ್ವಯ ನಡೆದ ತನಿಖೆಯಲ್ಲಿ ಆ
ಆರೋಪಿಗಳ ಪೈಕಿ ಕಿರಣ ಶರಣಪ್ಪ ಕುಂಬಾರ ಮುಖ್ಯ ಸೂತ್ರದಾರ ಎನ್ನಲಾಗಿದ್ದು, ಬಂಧಿತರಾದ ಕುಶಾಲಕುಮಾರ ಸವಣೂರ ಕಚೇರಿಯ ನೌಕರ.
ಇದೇ ರೀತಿ ಬಸವರಾಜ ಬಾಬಜಿ ಮತ್ತು ಮಹಾಂತೇಶ ಹಿರಗಣ್ಣವರ ಸಂಸ್ಥೆಯ ಸಿಬ್ಬಂದಿಯಾಗಿದ್ದಾರೆ. ಈ ಪ್ರಕರಣದಲ್ಲಿ ಕಳುವು ಮಾಡಿದ ಆರೋಪಿಗಳ ಹಾಗೂ ಕಳ್ಳತನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.
ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ಪಿ.ಐಗಳಾದ ಸಂಗಮೇಶ ದಿಡಿಗಿನಾಳರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಲಾಗಿತ್ತು. ಪಿಐಗಳಾದ ನಾಗೇಶ ಕಾಡದೇವರ, ಬಾಬಾ, ಎಂ, ಪಿಎಸ್ಐಗಳಾದ ಪ್ರಮೋದ, ಎಚ್.ಜಿ, ಎಂ. ಆರ್. ಮಲ್ಲಿಗವಾಡ, ಪಿ.ಎಸ್.ಐ, ಐ.ಐ. ಮದರಖಂಡಿ, ಸಿಬ್ಬಂದಿಗಳಾದ ಈರಣ್ಣ ಬುರ್ಜಿ, ಗಿರೀಶ ಚಿಕ್ಕಮಠ, ನಾಗರಾಜ ಗುಡಿಮನಿ, ಎಂ.ಸಿ.ಮಂಕಣಿ, ಬಿ.ಎಮ್. ಪಠಾತ, ಮಹಾಂತೇಶ, ವಾಯ್, ಎಂ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಗಿರೀಶ ಬಿದರಳ್ಳಿ, ವಿ.ಎಚ್. ಚವರಡ್ಡಿ, ಬಸವರಾಜ ಸವಣೂರ, ವಿ.ಎಸ್. ಕುದರಿ, ರಮೇಶ ಕೋತಂಬ್ರಿ, ಉಷಾ ಎಂ. ಎಚ್, ಮತ್ತಿತರರು ತನಿಖಾ ತಂಡದಲ್ಲಿದ್ದರು.