*ಗ್ಯಾರಂಟಿ ಸಮೀಕ್ಷೆಗೆ ಬೆಲ್ಲದ ಕಿಡಿ*
*ಮನೆಯೊಂದು ನಾಲ್ಕು ಬಾಗಿಲು : ಟೆಂಗಿನಕಾಯಿ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ಸೆಂಟ್ರಲ್ ಶಾಸಕ ಮಹೇಶ್ ಟೆಂಗಿನಕಾಯಿ ಇಬ್ಬರೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಗ್ಯಾರಂಟಿಯಿಲ್ಲದ ಯೋಜನೆ, ಅನುದಾನವಿಲ್ಲದ ರಾಜ್ಯ. ಪೊಳ್ಳು ಭರವಸೆಯೊಂದಿಗೆ ಅಧಿಕಾರಕ್ಕೆ ಏರಿದ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲಾಗದೆ ತಿಣುಕಾಡುತ್ತಿದೆ. ಇಷ್ಟಕ್ಕೇ ಸಾಲದುಯೆಂಬಂತೆರಾಜ್ಯದ ಜನ ಸರ್ಕಾರ ಹಾಗೂ ಗ್ಯಾರಂಟಿ ಬಗ್ಗೆ ಏನೆಂದುಕೊಳ್ಳುತ್ತಿದ್ದಾರೆ ಎಂದು ಕೋಟಿ ಕೋಟಿ ರೂಪಾಯಿ ಕೊಟ್ಟು ಸಮೀಕ್ಷೆ ಮಾಡಿಸುತ್ತಿರುವುದು ನಾಚಿಕೆಗೇಡು ಎಂದು ಬೆಲ್ಲದ ಹೇಳಿದ್ದಾರೆ.
ನಾಚಿಕೆ ಮಾನ ಎಲ್ಲವನ್ನು ಬಿಟ್ಟು ಜನರ ತೆರಿಗೆ ದುಡ್ಡನ್ನು ಸಂಸ್ಥೆಯೊಂದಕ್ಕೆ ನಿಯಮ ಮೀರಿ 4ಜಿ ವಿನಾಯಿತಿ ಮಾಡಿಸುವ ಮೂಲಕ ಹಣವನ್ನು ಸಂದಾಯ ಮಾಡಿದೆಯೆಂದು ಪ್ರಕಟಣೆಯಲ್ಲಿ ಬೆಲ್ಲದ ತಿಳಿಸಿದ್ದಾರೆ ಅಲ್ಲದೇ ಇದರಿಂದ ATMSarkar ಕ್ಕೆ ಅವನತಿಯ ಭಯ ತುಸು ಹೆಚ್ಚೇ ಕಾಡುತಿದ್ದೆ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಇನ್ನೊಂದೆಡೆ ಶಾಸಕ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಮೇರೆ ಮೀರಿದೆ, ಮನೆಯೊಂದು ನಾಲ್ಕು ಬಾಗಿಲಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ ಕೆ ಶಿ, ಪರಮೇಶ್ವರ ಹಾಗೂ ಸತೀಶ್ ಜಾರಕಿಹೊಳಿ ಹೀಗೆ 4 ಬಣವಿದೆ. ಆಂತರಿಕ ಕಚ್ಚಾಟದಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ. ಬಿಜೆಪಿಯ ಯಾವುದೇ ಶಾಸಕರು ಕೈ ಪಡೆ ಸೇರುವುದಿಲ್ಲ ಎಂದು ಬಿ.ಎಲ್ . ಸಂತೋಷ್ ಆಪ್ತವಲಯದ ಟೆಂಗಿನಕಾಯಿ ಹೇಳಿದರು.