*ಹಿಂದೂ ಜನಸಂಖ್ಯೆ ಹೆಚ್ಚಳವೇ ಉದ್ದೇಶ – ಮೂರನೇ ಮಕ್ಕಳ ಜವಾಬ್ದಾರಿ ಐ ಎಚ್ ಪಿಯದು*
ಹುಬ್ಬಳ್ಳಿ: ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣ, ತೀನ್ ಬಚ್ಚೆ ಹಿಂದೂ ಸಚ್ಚೆ ಅನ್ನೋದು ನಮ್ಮ ಉದ್ದೇಶ.ಹಿಂದೂ ದಂಪತಿಗೆ ಮೂರು ಮಕ್ಕಳನ್ನು ಹೆರಬೇಕೆಂದು ಅಂತರರಾಷ್ಟೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಕರೆ ನೀಡಿದರಲ್ಲದೇ ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಪರಿಷತ್ ವಹಿಸಲಿದೆ ಎಂದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯ. ಹಿಂದೂಗಳ ಜನಸಂಖ್ಯೆ ಹೆಚ್ಚಿಸಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬ ಹಿಂದೂ ದಂಪತಿ ಮೂರು ಮಕ್ಕಳನ್ನು ಹೆರಬೇಕು.ಮೂರು ಮಕ್ಕಳನ್ನು ಹೆರುವ ಹಿಂದೂ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಜೊತೆಗೆ, ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಸಹ ನಾವೇ ಹೊರುತ್ತೇವೆ ಎಂದರು.
ಸಂವಿಧಾನದ ಭರವಸೆ, ಆಶಯದ ಮೇಲೆ ರಚಿತವಾದ ಸರ್ಕಾರ ಯಾವುದೇ ಪಕ್ಷವಾಗಿರಲಿ, ಹಿಂದೂಗಳ ರಕ್ಷಣೆ ವಿಷಯದಲ್ಲಿ ತಾರತಮ್ಯ ಮಾಡಬಾರದು. ರಾಜಕೀಯ, ರಾಜನೀತಿಯನ್ನು ಬದಿಗಿಟ್ಟು ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಹಿಂದೂಗಳ ಹಿತರಕ್ಷಣೆ, ಸುರಕ್ಷತೆಗಾಗಿ ಎಲ್ಲ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂ ಪಕ್ಷ ವಿಚಾರ ತಳ್ಳಿ ಹಾಕಿದ ಅವರು ಭಾರತ ಹಿಂದೂ ರಾಷ್ಟ್ರವೇ ಆಗಿದೆ. ಆದರೆ, ಅದು ದೇಶದ ಜನತೆಯ ಅನುಭವಕ್ಕೆ ಬರುವಂತೆ ಮಾಡಬೇಕಾಗಿದೆ. ನಾವು ಹೆಸರಿಗಾಗಿ ,ರಾಮ ಮಂದಿರಕ್ಕಾಗಿ ಆಂದೋಲನ ಮಾಡಲಿಲ್ಲಾ
ರಾಮ ಮಂದಿರಕ್ಕಾಗಿ ಮಾಡಿದೆವು, ಅದು ಪೂರ್ಣಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪದರುರೇಷನ್ ಸಿಂಧೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಾಕಿಸ್ತಾನದ ಗಡಿದಾಟಿ ಹೊಡೆದಿದ್ದು ಉತ್ತಮ. ಆದರೆ, ಇದು ಇನ್ನಷ್ಟು ಹೆಚ್ಚಾಗಿದ್ದರೆ ಹಿಂದೂಗಳು ಮತ್ತಷ್ಟು ಸಂತಸಗೊಳ್ಳುತ್ತಿದ್ದರು’ ಎಂದರು.
ಸಮೃದ್ಧ, ಸುರಕ್ಷಿತ, ಸನ್ಮಾನಿತ ಹಾಗೂ ಸ್ವಾಸ್ಥ್ಯ ಹಿಂದೂ ನನ್ನ ಸಂಕಲ್ಪ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ. ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕುವ ಹಿಂದುಗಳಿಗಾಗಿ, ದೇಶದಾದ್ಯಂತ ಸಹಾಯವಾಣಿ ಆರಂಭಿಸಲಾಗಿದೆ. ಆನ್ಲೈನ್ ಮೂಲಕವೂ ಸಮಸ್ಯೆ ಹೇಳಿಕೊಳ್ಳಬಹುದು. ಕಾನೂನು ನೆರವಿಗೆ ಅಡ್ವಕೇಟ್ ಹೆಲ್ಪ್ಲೈನ್ ಸಹ ಆರಂಭಿಸಲಾಗಿದೆ. ಸ್ವಾಸ್ಥ್ಯ ಹಿಂದೂಗಾಗಿ, 10 ಸಾವಿರ ಖಾಸಗಿ ಹಿಂದೂ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.
ಬೆಳಿಗ್ಗೆ ಕೇಶ್ವಾಪುರದಲ್ಲಿ ಉದ್ಯಮಿ ಲಲಿತ್ ಜೈನ ನಿವಾಸದಲ್ಲಿ ಉಪಹಾರ ಸೇವಿಸಿ, ಶ್ರೀ ಸಿದ್ಧಾರೂಢ ಮಠದಲ್ಲಿ ಉಭಯ ಶ್ರೀ ಗಳು ದರ್ಶನ ಪಡೆದು, ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ತದನಂತರ ಹಿಂದೂ ಚಿಂತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಸಂಸದ ವಿಜಯ ಸಂಕೇಶ್ವರ, ಡಾ.ಆನಂದ ಪಾಂಡುರಂಗಿ, ಐಎಚ್ಪಿ ರಾಜ್ಯ ಕಾರ್ಯಾಧ್ಯಕ್ಷ ರಮೇಶ್ ಕುಲಕರ್ಣಿ, ಭವರಲಾಲ ಜೈನ, ಸುರೇಶ್ ಜೈನ್, ಅಶೋಕ್ ಅಮೀನಗಡ, ಮೋಹನ್ ಬಿಲಾನಾ ಮುಂತಾದವರು ಇದ್ದರು.